ಪತ್ನಿ, ಅತ್ತೆ, ನಾದಿನಿಯಿಂದಾಗಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Public TV
1 Min Read

– ಇಂದು ಬೆಳಗ್ಗೆ ಕೆರೆಯಲ್ಲಿ ಶವ ಪತ್ತೆ
– ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟ

ಭೋಪಾಲ್: ಮಧ್ಯ ಪ್ರದೇಶದ ಭವರ್ಕುವಾದ ಪಿಪಲಿಯಾ ಕೆರೆಯಲ್ಲಿ ಇಂದು ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನ ಬಳಿ ಡೆತ್ ನೋಟ್ ಲಭ್ಯವಾಗಿದ್ದು, ಪತ್ನಿ, ಅತ್ತೆ ಮತ್ತು ನಾದಿನಿಯಿಂದಾಗಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ಪತ್ರದಲ್ಲಿ ಬರೆಯಲಾಗಿದೆ.

ಪ್ರತಾಪನಗರದ ನಿವಾಸಿ 33 ವರ್ಷದ ರಾಜಕುಮಾರ್ ಉರ್ಫ್ ರಾಜು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ರಾಜಕುಮಾರ್ ಕೇಟರಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಕೆಲಸದ ವಿಷಯವಾಗಿ ಸೋಮವಾರ ಮನೆಯಿಂದ ಹೊರ ಹೋಗಿದ್ದ ರಾಜಕುಮಾರ್ ಮಂಗಳವಾರ ರಾತ್ರಿಯಾದ್ರೂ ಹಿಂದಿರುಗಿರಲಿಲ್ಲ. ಇಂದು ಬೆಳಗ್ಗೆ ಪಿಪಲಿಯಾ ಕೆರೆಯಲ್ಲಿ ರಾಜಕುಮಾರ್ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಬೆಂಗಳೂರಿನ ರೌಡಿ ಬಾಂಬೆ ಸಲೀಂ ಪತ್ನಿ ಜೊತೆ ಚಾಟಿಂಗ್- ಯುವಕನ ಭೀಕರ ಕೊಲೆ

ಸೂಸೈಡ್ ನೋಟ್ ನಲ್ಲಿ ಏನಿತ್ತು?: ನನ್ನ ಹೆಸರು ರಾಜಕುಮಾರ್, ಪತ್ನಿ ಕುಟುಂಬಸ್ಥರ ಕಿರುಕುಳದಿಂದ ಸೂಸೈಡ್ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಸಾವಿನ ಬಗ್ಗೆ ಯಾರಿಗೂ ತೊಂದರೆ ಕೊಡಬೇಕು. ತೊಂದರೆ ಕೊಡುವದಿದ್ದರೆ ಪತ್ನಿ, ಅತ್ತೆ ಮತ್ತು ನಾದಿನಿಗೆ ನೀಡಿ. ಯಾಕೆಂದರೆ ಅವರಿಂದಲೇ ನಾನು ಸಾಯುತ್ತಿದ್ದೇನೆ ಎಂದು ಬರೆಯುವ ಮೂಲಕ ತಮ್ಮ ಸಾವಿಗೆ ಮೂವರು ಕಾರಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಯಿ ಚೈನ್‍ನಿಂದ ಕತ್ತು ಹಿಸುಕಿ, ಚಾಕುವಿನಿಂದ ಇರಿದು ಪತ್ನಿಯ ಕೊಲೆಗೈದ!– ಎರಡು ತಿಂಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದ ಜೋಡಿ

Share This Article
Leave a Comment

Leave a Reply

Your email address will not be published. Required fields are marked *