ಆಡು-ಕುರಿಗಳಿಗೆ ಮೇವು ತರಲು ಹೋಗಿ ಮರದ ಮೇಲೆ ಶವವಾದ ರೈತ

Public TV
1 Min Read

ಹಾಸನ: ಕುರಿ ಮತ್ತು ಆಡುಗಳಿಗೆ ಸೊಪ್ಪು ಕತ್ತರಿಸಲು ಮರದ ಮೇಲೆ ಹತ್ತಿದ್ದ ರೈತನೋರ್ವ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ, ರಾಗಿಮರೂರು ಗ್ರಾಮದಲ್ಲಿ ನಡೆದಿದೆ.

38 ವರ್ಷದ ಧರ್ಮ ಮೃತ ದುರ್ದೈವಿ. ಧರ್ಮ ಅವರು ಕುರಿ ಮತ್ತು ಆಡುಗಳಿಗೆ ಸೊಪ್ಪು ಕಡಿಯಲು ಮರ ಹತ್ತಿದ್ದಾರೆ. ಈ ಸಂದರ್ಭದಲ್ಲಿ ಮರದ ಪಕ್ಕದಲ್ಲೇ ಇದ್ದ ವಿದ್ಯುತ್ ತಂತಿ ತಗುಲಿ ಮರದ ಮೇಲೆಯೇ ಮೃತ ಪಟ್ಟಿದ್ದಾರೆ. ಮೃತ ವ್ಯಕ್ತಿಯು ವ್ಯವಸಾಯದ ಜೊತೆಗೆ ಜೀಪು ಚಾಲಕನಾಗಿ ಕೆಲಸ ಮಾಡುತ್ತಿದ್ದರು.

ದಿನ ಜೀಪು ಓಡಿಸಲು ಹೋಗುತ್ತಿದ್ದ ಧರ್ಮ ಅವರು, ಈ ದಿನ ಭಾನುವಾರವಾಗಿದ್ದರಿಂದ ಮನೆಯಲ್ಲೇ ಇದ್ದರು. ಈ ವೇಳೆ ತಾನೇ ಕುರಿ ಮೇಯಿಸಲು ಹೋದ ವೇಳೆ ಈ ಅವಘಡ ಸಂಭವಿಸಿದೆ. ಮೃತರಿಗೆ ಪತ್ನಿ ಇಬ್ಬರು ಹೆಣ್ಣು ಮಕ್ಕಳಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ರಾಮನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *