ಪತ್ನಿ, ಅತ್ತೆಯನ್ನು ಕೊಡಲಿಯಿಂದ ಕಡಿದು ಕೊಂದ ಅಳಿಯ

Public TV
1 Min Read

ಬಾಗಲಕೋಟೆ; ಪತ್ನಿ ಹಾಗೂ ಅತ್ತೆಯನ್ನು ಕೊಡಲಿಯಿಂದ ಕಡಿದು ಅಳಿಯನೇ ಕೊಲೆಗೈದಿರುವ ಘಟನೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ನಡೆದಿದೆ.

ವಿಠಲ್ ಮನಗೂಳಿ ಪತ್ನಿ ಹಾಗೂ ಅತ್ತೆಯನ್ನ ಕೊಲೆಗೈದ ಪತಿ. ಪತ್ನಿ ರಂಜಿತಾ (22), ಅತ್ತೆ ರೇಣವ್ವ (50) ಕೊಲೆಯಾದವರು. ಒಂದು ವರ್ಷದ ಹಿಂದೆ ವಿಠ್ಠಲ್ ಮತ್ತು ರಂಜಿತಾ ಮದುವೆ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದಿತ್ತು. ಒಂದು ವಾರದ ಹಿಂದೆ ಗಂಡ-ಹೆಂಡತಿ ಜಗಳ ಆಗಿದ್ದರಿಂದ ರಂಜಿತಾ ತವರು ಮನೆ ಸೇರಿದ್ದರು.

ಎರಡು ದಿನದ ಹಿಂದೆ ರಂಜಿತಾ ತಾಯಿ ರೇಣವ್ವ ಜೊತೆ ಪತಿಯ ಮನೆಗೆ ಆಗಮಿಸಿದ್ದರು. ಭಾನುವಾರ ರಾತ್ರಿ ಮೂವರ ನಡುವೆ ಜಗಳ ನಡೆದಿದೆ. ಕೋಪದಲ್ಲಿ ವಿಠ್ಠಲ್ ಮನೆಯಲ್ಲಿದ್ದ ಕೊಡಲಿಯಿಂದ ಅತ್ತೆ ಹಾಗೂ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಆಸ್ತಿ ಹಾಗೂ ವರದಕ್ಷಿಣೆ ನೀಡದ ಹಿನ್ನೆಲೆ ಕೊಲೆ ನಡೆದಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *