ಅಕಾಲಿಕ ಮಳೆಗೆ ಬೆಳೆ ಹಾನಿಯಾದ ಜಮೀನು ಸರ್ವೆ ಬಳಿಕ ರೈತರಿಗೆ ಪರಿಹಾರ: ಬಿ.ಸಿ ಪಾಟೀಲ್

Public TV
1 Min Read

ಯಾದಗಿರಿ: ಅಕಾಲಿಕ ಮಳೆ ಗಾಳಿಗೆ ಬೆಳೆ ಹಾನಿ ಸಂಭವಿಸಿದ ರೈತರ ಜಮೀನು ಸರ್ವೆ ಮಾಡಿದ ಬಳಿಕ ಪರಿಹಾರ ನೀಡುವ ಚಿಂತನೆ ನಡೆಸಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅನ್ನದಾತರಿಗೆ ಭರವಸೆ ನೀಡಿದ್ದಾರೆ.

ರೈತರ ಬೆಳೆ ಹಾನಿ ಸಮಸ್ಯೆ ಬಗ್ಗೆ ಸಿಎಂ ಗಮನಕ್ಕೆ ತಂದು ಪರಿಹರಿಸುವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಹಾಗೆಯೇ ರೈತರಿಗೆ ಲಾಕ್‍ಡೌನ್ ಸಮಸ್ಯೆ ಇಲ್ಲ. ರೈತರು ಬೆಳೆದ ತರಕಾರಿ ಹಾಗೂ ಶೀಘ್ರ ಕೊಳೆತು ಹೋಗುವಂತ ಹಣ್ಣು-ಹಂಪಲು ಮಾರಾಟಕ್ಕೆ ಯಾವುದೇ ನಿರ್ಬಂಧ ಇಲ್ಲ. ರೈತರಿಗೆ ಮುಕ್ತವಾಗಿ ಮಾರಾಟಕ್ಕೆ ಅನುವು ಮಾಡಿಕೊಟ್ಟಿದ್ದೇವೆ ಎಂದು ಸಚಿವರು ತಿಳಿಸಿದರು.

ರೈತರ ಬೆಳೆ ವಿಮೆಯಲ್ಲಿ ಕೆಲವೊಂದು ಮಿಸ್ ಮ್ಯಾಚ್ ಆಗಿರೊದು ನಿಜ. ಜಿಪಿಎಸ್ ದೋಷದಿಂದ ಕೆಲವು ಸಮಸ್ಯೆ ಆಗಿವೆ. ಆದರೆ ಅಧಿಕಾರಿಗಳು ರಿ-ಸರ್ವೇ ಮಾಡಿ, ಪರಿಶೀಲಿಸಿ ಎಲ್ಲವನ್ನು ಸರಿ ಮಾಡುತ್ತಾರೆ ಎಂದು ಬಿ.ಸಿ ಪಾಟೀಲ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *