ದೀಪ ಬೆಳಗಿದ ಸಿದ್ದಗಂಗಾ ಶ್ರೀಗಳು- ಮುಸ್ಲಿಂ ಕುಟುಂಬದಿಂದ ದೀಪಾರಾಧನೆ

Public TV
1 Min Read

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರುವ ದೀಪಾರಾಧನೆ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮನೆ ಮನೆಗಳಲ್ಲಿ ದೀಪ ಬೆಳಗಿದ ಜನರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ತುಮಕೂರ ಜಿಲ್ಲೆಯಾದ್ಯಂತ ಬಹುತೇಕ ಎಲ್ಲರ ಮನೆಗಳಲ್ಲೂ ದೀಪ ಹಚ್ಚಲಾಯಿತು. ದೀಪಾವಳಿಯ ಸಂಭ್ರಮವೇ ಮನೆ ಮಾಡಿತ್ತು.

ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಶ್ರೀಗಳು ಮಠದಲ್ಲಿ ದೀಪ ಹಚ್ಚಿ ಮಕ್ಕಳೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು.

ಇನ್ನೊಂದೆಡೆ ತುಮಕೂರು ನಗರದ ಶಿರಾಗೇಟ್‍ನ ಮುಸ್ಲಿಂ ಸಮುದಾಯದ ಕುಟುಂಬಗಳು ಹಣತೆ ಹಚ್ಚಿ ಪ್ರಧಾನಿ ಮೋದಿ ಕರೆಗೆ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು. ಮುಸ್ಲಿಂ ಸಮುದಾಯದ ಮಕ್ಕಳಾದಿಯಾಗಿ ಎಲ್ಲರೂ ಹಣತೆ ಕೈಯಲ್ಲಿ ಹಿಡಿದು ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿದರು.

Share This Article
Leave a Comment

Leave a Reply

Your email address will not be published. Required fields are marked *