ಬೆಳಗ್ಗೆ ಮನೆಯಲ್ಲಿದ್ದು ಸಂಜೆ ಆಗ್ತಿದ್ದಂತೆ ಹೊರಗೆ ಬರುವ ಜನರಿಗೆ ಬಿತ್ತು ಲಾಠಿ ಏಟು

Public TV
1 Min Read

ಬಳ್ಳಾರಿ: ಕೊರೊನಾ ಮಹಾಮಾರಿಗೆ ಇಡೀ ವಿಶ್ವವೇ ಹೆದರಿದ್ದು ಭಾರತ ಸಂಪೂರ್ಣವಾಗಿ 21 ದಿನಗಳ ಕಾಲ ಲಾಕ್‍ಡೌನ್ ಆದೇಶ ಮಾಡಲಾಗಿದೆ. ಆದರೆ ಜನ ತಮ್ಮ ಬೇಜವಾಬ್ದಾರಿಯಿಂದ ಮುಂಜಾನೆ ಮಾತ್ರ ಮನೆಯಲ್ಲಿದ್ದು ಸಂಜೆ ಆಗುತ್ತಿದ್ದಂತೆ ಬೈಕ್ ತೆಗೆದುಕೊಂಡು ರೋಡ್ ರೋಡ್ ಅಲೆಯುತ್ತಿದ್ದಾರೆ.

ಸರ್ಕಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹೀಗೆ ಎಲ್ಲರೂ ಮನೆಯಿಂದ ಹೊರಗೆ ಬರಬೇಡಿ ಎಂದು ಜನರಲ್ಲಿ ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಜನ ಮಾತ್ರ ಇದಕ್ಕೆ ಕ್ಯಾರೆ ಮಾಡುತ್ತಿಲ್ಲ. ಸಂಜೆ ಆಗುತ್ತಿದ್ದಂತೆ ಅಲ್ಲಲ್ಲಿ ಟೀ ಸ್ಟಾಲ್ ಸೇರಿದಂತೆ ಗುಂಪು ಗುಂಪು ಸೇರುತ್ತಿದ್ದಾರೆ. ಆದರೆ ಪೊಲೀಸ್ ಅದಕ್ಕೆ ಬ್ರೇಕ್ ಹಾಕಿದ್ದಾರೆ.

ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದು, ರಸ್ತೆಯಲ್ಲಿ ಅಲೆಯುತ್ತಿದ್ದ ಜನರಿಗೆ ಲಾಠಿ ರುಚಿ ತೋರಿಸಿದ್ದಾರೆ. ಪ್ರತಿ ರಸ್ತೆಯಲ್ಲಿ ಪೊಲೀಸ್ ಒಂದು ಸುತ್ತ ಗಸ್ತು ತಿರಗಿು ಮನೆಯಿಂದ ಹೊರಗೆ ಬಂದ ಜನರಿಗೆ ಲಾಠಿ ಏಟು ನೀಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *