ಮಹಿಳೆ ಹೊಟ್ಟೆಯಿಂದ 25 ಕೆಜಿ ಗೆಡ್ಡೆ ಹೊರ ತೆಗೆದ ತಿಪಟೂರಿನ ವೈದ್ಯರು

Public TV
1 Min Read

ತುಮಕೂರು: ಮಹಿಳೆ ಹೊಟ್ಟೆಯಲ್ಲಿದ್ದ 25 ಕೆಜಿ ಅಂಡಾಶಯ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ತಿಪಟೂರಿನ ಕುಮಾರ್ ಆಸ್ಪತ್ರೆ ಯಶಸ್ವಿಯಾಗಿದ್ದಾರೆ.

ದೀರ್ಘಕಾಲ ಹೊಟ್ಟೆನೋವಿನಿಂದ ಬಳಲುತ್ತಿದ್ದ ತುರುವೇಕೆರೆ ತಾಲೂಕಿನ ಲಕ್ಷ್ಮಿದೇವಿ ಮಾರ್ಚ್ 17ರಂದು ಆಸ್ಪತ್ರೆಗೆ ದಾಖಲಾಗಿದ್ದರು.  ಡಾ.ಶ್ರೀಧರ್ ಮತ್ತು ತಂಡವು ಸುಮಾರು 1 ಗಂಟೆ  ಕಾಲ  ಶಸ್ತ್ರ ಚಿಕಿತ್ಸೆ ನಡೆಸಿ ಗೆಡ್ಡೆಯನ್ನು ಹೊರತೆಗೆದು ರೋಗಿಯ ಪ್ರಾಣ ಉಳಿಸಿದ್ದಾರೆ.

ಲಕ್ಷ್ಮಿದೇವಿ ಅವರು ಹಲವು ಆಸ್ಪತ್ರೆ ಮತ್ತು ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರೂ ರೋಗ ಪತ್ತೆಯಾಗಿರಲಿಲ್ಲ. ಬಳಿಕ ಕುಮಾರ್ ಆಸ್ಪತ್ರೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಆಗ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ವೈದ್ಯರಿಗೆ ತಿಳಿದಿತ್ತು. ಈ ಮೂಲಕ ಲಕ್ಷ್ಮಿದೇವಿ ಅವರಿಗೆ ಆಪರೇಷನ್ ಮಾಡುವ ಮೂಲಕ ಗೆಡ್ಡೆಯನ್ನು ಹೊರ ತೆಗೆದು ದಾಖಲೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *