ಕೆಇಬಿ ನೌಕರರಿಗೆ ಕೊರೊನಾ ಭೀತಿ- ನಕಲಿ ಪತ್ರ ವೈರಲ್

Public TV
1 Min Read

ಮಂಡ್ಯ: ಕೆಇಬಿ ನೌಕರರಿಗೆ ಕೊರೊನಾ ವೈರಸ್ ಭೀತಿ ಎದುರಾಗಿದ್ದು, ಹಳ್ಳಿಗಳಲ್ಲಿ ನಮ್ಮ ನೌಕರರು ಕೆಲಸ ಮಾಡಲು ಹೆದುರುತ್ತಿದ್ದಾರೆ. ಕೆಬಿಪಿಯ ಜೆಇ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಮೇಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಇಂತಹದೊಂದು ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯ ಕೆಇಬಿಯ ಜೆಇ ಕೃಷ್ಣೇಗೌಡ ಅವರ ಹೆಸರಿನಲ್ಲಿ ಕೆಇಬಿಯ ಮೇಲಾಧಿಕಾರಿಗೆ ಕೊರೊನಾ ವೈರಸ್ ಶಂಕೆಯ ಕುರಿತು ಭಯ ವ್ಯಕ್ತ ಪಡಿಸಿ ಪತ್ರ ಬರೆದಿದ್ದಾರೆ.

ಕಿಕ್ಕೇರಿ ಭಾಗದಲ್ಲಿ ಅನೇಕರು ಮುಂಬೈನಿಂದ ಬಂದಿದ್ದಾರೆ ಹಾಗೂ ಕೇರಳ ಭಾಗದಿಂದಲೂ ಸಾಕಷ್ಟು ಜನರು ಬರುತ್ತಾರೆ. ಹೀಗಾಗಿ ಹಳ್ಳಿಗಳಲ್ಲಿ ಕೊರೊನಾ ವೈರಸ್ ಇದೆ ಎಂಬ ಕಾರಣಕ್ಕಾಗಿ ನಮ್ಮ ಸಿಬ್ನಂದಿ ಕೆಲಸ ಮಾಡಲು ಹೆದರುತ್ತಿದ್ದಾರೆ. ಇದಲ್ಲದೇ ನಮ್ಮ ಇಲಾಖೆ ಇಬ್ಬರು ಸಿಬ್ಬಂದಿಗೆ ಕೊರೊನಾ ವೈರಸ್ ಇರುವ ಶಂಕೆಯೂ ಸಹ ಇದೆ. ಹೀಗಾಗಿ ಅವರನ್ನು ನಾವು ಮನೆಯಿಂದ ಹೊರ ಬಾರದಂತೆ ತಿಳಿಸಿದ್ದೇವೆ ಎಂದು ಕಿಡಿಗೇಡಿಗಳು ಪತ್ರ ಬರೆದಿದ್ದಾರೆ.

ಇದು ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿ. ಈ ಬಗ್ಗೆ ಕ್ರಮ ಜರುಗಿಸುವುದಾಗಿ ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *