ಹಳೆ ದೋಸ್ತಿಗಳ ನಡುವೆ ಮತ್ತೆ ಚಿಗುರಿದ ಸ್ನೇಹ

Public TV
1 Min Read

ಬೆಂಗಳೂರು: ವಿಧಾನ ಪರಿಷತ್ ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿ ದಿನ ಸುಮ್ಮನಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರುಗಳು ಏಕಾಏಕಿಯಾಗಿ ಈಗ ಸಕ್ರೀಯವಾಗಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಪರಿಷತ್ ಹಾದಿ ಸುಗಮ ಎಂದುಕೊಂಡಿದ್ದವರಿಗೆ ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಅನಿರೀಕ್ಷಿತ ಸವಾಲು ಎಸೆದಿವೆ.

ಕಾಂಗ್ರೆಸ್ ಮುಖಂಡ ಅನಿಲ್ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು ಬಿಜೆಪಿಗೆ ಸಡನ್ ಶಾಕ್ ಎದುರಾಗಿದೆ. ಸಂಖ್ಯಾ ಬಲದಲ್ಲಿ ಬಿಜೆಪಿ ಮುಂದಿದೆ. ಆದರೆ ಸಂಪುಟ ಗೊಂದಲದಲ್ಲಿ ಶುರುವಾದ ಸಣ್ಣ ಅಸಮಧಾನ ಭುಗಿಲೆದ್ದರೆ ಎನ್ನುವ ಆತಂಕ ಸಹಜವಾಗಿಯೇ ಕಮಲ ಪಾಳಯದ ನೆಮ್ಮದಿ ಕೆಡಿಸಿದೆ.

ಸಂಖ್ಯಾ ಬಲದ ಕೊರತೆಯಿಂದ ಸುಮ್ಮನಿದ್ದ ಕಾಂಗ್ರೆಸ್ ಜೆಡಿಎಸ್ ಬಿಜೆಪಿಯ ಅಸಮಧಾನದ ಲಾಭ ಸಿಗಬಹುದು ಎನ್ನುವ ಆಸೆಯಲ್ಲಿ ತೆರೆಮರೆಯಲ್ಲೇ ಕೈ ಜೋಡಿಸಲು ಮುಂದಾಗಿವೆ. ಸಂಪುಟ ವಿಸ್ತರಣೆ, ಮೂಲ ಹಾಗೂ ವಲಸಿಗ ಗಲಾಟೆ ಎಲ್ಲವು ಸೇರಿ ಗೊಂದಲ ಹೆಚ್ಚಾದರೆ ಮುಂದಿನ ದಿನಗಳಲ್ಲಾದರೂ ಅದರ ಲಾಭ ಪಡೆಯಬಹುದು ಎನ್ನುವ ಆಸೆ ಹಳೆ ದೋಸ್ತಿಗಳಲ್ಲಿ ಚಿಗುರಿದಂತಿದೆ.

ಸಿಕ್ಕ ಅವಕಾಶವನ್ನ ಬಳಸಿಕೊಂಡು ಬಿಜೆಪಿಗೆ ಟಕ್ಕರ್ ನೀಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಬಿಜೆಪಿ ಪರಿಷತ್ ಅಖಾಡದಲ್ಲಿ ಕೈ ಜೋಡಿಸಲು ಮುಂದಾದಂತಿದೆ. ಈ ಪ್ರಯತ್ನದಲ್ಲಿ ಎಷ್ಟರ ಮಟ್ಟಿಗೆ ಲಾಭ ಸಿಗುತ್ತದೋ ಗೊತ್ತಿಲ್ಲ. ಆದರೆ ತೆರೆ ಮರೆ ಪ್ರಯತ್ನದಲ್ಲಿ ದೋಸ್ತಿಗಳ ನಡುವೆ ಪರಸ್ಪರ ವಿಶ್ವಾಸ ಮೂಡಿದರೆ ಮುಂದಿನ ದಿನಗಳಲ್ಲಿ ಇಬ್ಬರು ಸೇರಿಕೊಂಡು ಪರಿಸ್ಥಿತಿಯ ಲಾಭ ಪಡೆಯಬಹುದು ಎನ್ನುವ ಲೆಕ್ಕಾಚಾರವಂತು ಇದ್ದಂತಿದೆ.

Share This Article
Leave a Comment

Leave a Reply

Your email address will not be published. Required fields are marked *