ಜೀವಂತವಾಗಿದೆ ಮೌಢ್ಯ ಆಚರಣೆ- ಹಾಲಿ, ಮಾಜಿ ಶಾಸಕರಿಂದಲೇ ಮೌಢ್ಯತೆಗೆ ಚಾಲನೆ

Public TV
1 Min Read

ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಸಿಡಿ ಉತ್ಸವದ ಮೌಢ್ಯತೆ ಇನ್ನು ಜೀವಂತವಾಗಿದೆ. ಈ ಆಚರಣೆಗೆ ಹಾಲಿ ಮತ್ತು ಮಾಜಿ ಶಾಸಕರು ಚಾಲನೆ ನೀಡಿದ್ದಾರೆ.

ಕೆಂಚಿಕೊಪ್ಪ ಗ್ರಾಮದಲ್ಲಿ 10 ವರ್ಷಗಳ ಬಳಿಕ ಮಾಯಮ್ಮ ಹಾಗೂ ಗುಳ್ಳಮ್ಮ ದೇವಿಯ ಜಾತ್ರೆಯನ್ನು ಆಚರಿಸಲಾಗುತ್ತಿತ್ತು. ಈ ಜಾತ್ರೆಯಲ್ಲಿ ನಿಷೇಧಿತ ಸಿಡಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಈ ಉತ್ಸವಕ್ಕಾಗಿ ಎರಡು ಬಂಡಿಗಳನ್ನು ಸಿದ್ಧಪಡಿಸಲಾಗುತ್ತದೆ. ಒಂದು ರೈತರದ್ದು ಮತ್ತೊಂದು ಗೌಡರದ್ದು. ಈ ಎರಡು ಬಂಡಿಗೆ ದಲಿತ ಮಹಿಳೆಯರಿಬ್ಬರನ್ನು ಕಟ್ಟಲಾಗುತ್ತದೆ. ಹೀಗೆ ಕಟ್ಟಿದ ಬಳಿಕ ಮಹಿಳೆಯರನ್ನು ಮೇಲಕ್ಕೆ ಏರಿಸಿ ಸುತ್ತಿಸಲಾಗುತ್ತದೆ. ಒಂದು ಬಂಡಿಗೆ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಇನ್ನೊಂದು ಬಂಡಿಗೆ ಕಾಂಗ್ರೆಸ್ ಮಾಜಿ ಶಾಸಕ ಡಿ.ಜಿ.ಶಾಂತನಗೌಡರ ಚಾಲನೆ ನೀಡಿದರು.

ಇಂತಹ ಅನಿಷ್ಠ ಪದ್ಧತಿಯನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದರೂ, ಇಬ್ಬರು ನಾಯಕರು ಸಿಡಿ ಉತ್ಸವಕ್ಕೆ ಚಾಲನೆ ನೀಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *