ಮುದುಕಿ ಎನ್ನುವುದನ್ನೂ ಲೆಕ್ಕಿಸದ ಕಳ್ಳರು- ಎಳೆದ ರಭಸಕ್ಕೆ ನೆಲಕ್ಕುರುಳಿ ಒದ್ದಾಡಿದ ವೃದ್ಧೆ

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರಗಳ್ಳರ ಹಾವಳಿ ಮಿತಿ ಮೀರುತ್ತಿದ್ದು, ಮಹಿಳೆಯರು, ವೃದ್ಧೆಯರು ಚಿನ್ನಾಭರಣ ಧರಿಸಿ ಓಡಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ವೃದ್ಧೆಯನ್ನೂ ಬಿಡದ ಕಳ್ಳರು, ಸರ ಕದಿಯುವ ಭರದಲ್ಲಿ ಹಲ್ಲೆ ನಡೆಸಿದ್ದಾರೆ.

ಅಜ್ಜಿಯನ್ನೂ ಬಿಡದ ಕಳ್ಳ ಕುತ್ತಿಗೆಯಲ್ಲಿನ ಸರಕ್ಕೆ ಕೈ ಹಾಕಿ ಎಳೆದು ನೆಲಕ್ಕೆ ಬೀಳಿಸಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಪರಿಚಯಸ್ಥರ ರೀತಿ ಮಾತನಾಡಿಕೊಂಡು ಹತ್ತಿರ ಬಂದು ಸರ ಎಳೆದಿದ್ದಾನೆ.

ಬೈಕ್‍ನಲ್ಲಿದ್ದ ಕಳ್ಳರು ನಿಧಾನವಾಗಿ ಬಂದು ವೃದ್ಧೆಯ ಸರಕ್ಕೆ ಕೈ ಹಾಕಿ ಎಳೆದಿದ್ದಾರೆ. ಎಳೆಯುವ ರಭಸಕ್ಕೆ ಅಜ್ಜಿ ಮಕಾಡೆ ಬೀಳುತ್ತಾರೆ. ಆಗ ಕಳ್ಳ ಸರ ಕಿತ್ತುಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಾರೆ. ಅಜ್ಜಿಯ ಸರ ಕೀಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗೇಟಿನೊಳಗೆ ಹೋಗುತ್ತಿದ್ದ ಅಜ್ಜಿಯನ್ನು ಮಾತನಾಡಿಸುವ ನೆಪದಲ್ಲಿ ತಡೆದು ಕಳ್ಳರು ಕೈ ಚಳಕ ತೋರಿದ್ದಾರೆ. ಈ ಕುರಿತು ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *