ದೇವಸ್ಥಾನದಲ್ಲೇ ಕಾಲ ಕಳೆದ ನೆರೆ ಸಂತ್ರಸ್ತೆ- ಮನೆ ಇಲ್ಲದೆ ಬಿದಿಗೆ ಬಿದ್ದ ಬದುಕು

Public TV
1 Min Read

ಧಾರವಾಡ: ನೇರೆ ಸಂತ್ರಸ್ತೆಯೊಬ್ಬರು ಕಳೆದ ರಾತ್ರಿ ದೇವಸ್ಥಾನದಲ್ಲಿಯೇ ಮಲಗಿ ಕಾಲ ಕಳೆದ ಘಟನೆ ಧಾರವಾಡ ಜಿಲ್ಲೆಯ ಮಾರಡಗಿ ಗ್ರಾಮದಲ್ಲಿ ನಡೆದಿದೆ.

ಕಳೆದ 4 ತಿಂಗಳ ಹಿಂದೆ ನೇರೆ ಹಾಗೂ ಪ್ರವಾಹದಿಂದ ಮಹಿಳೆ ನೀಲಮ್ಮ ಕಲಕೇರಿಯವರ ಮನೆ ಬಿದ್ದಿತ್ತು. ನಂತರ ಈ ಮಹಿಳೆ ಅದೇ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಶನಿವಾರ ಬಾಡಿಗೆ ಮನೆ ಮಾಲೀಕ ಏಕಾಏಕಿ ನೀಲಮ್ಮಳನ್ನು ಮನೆ ಬಿಡಿಸಿದ್ದಾರೆ. ಇದರಿಂದ ನೀಲಮ್ಮ ಎಲ್ಲಿಗೆ ಹೋಗಬೇಕು ಎಂದು ತಿಳಿಯದೇ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ರಾತ್ರಿ ಕಳೆದಿದ್ದಾರೆ.

ಬೆಳಗ್ಗೆ ಎದ್ದ ನಂತರವೂ ನೀಲಮ್ಮ ಅದೇ ದೇವಸ್ಥಾನದ ಆವರಣದಲ್ಲಿ ಅಡುಗೆ ಮಾಡಿಕೊಂಡಿದ್ದಳು. ಮನೆ ಬಿದ್ದಿರುವ ಬಗ್ಗೆ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ತಿಳಿಸಿ, ಮನೆ ಕಟ್ಟಿ ಕೊಡಲು ಮನವಿ ಮಾಡಿದ್ದರು ಕೂಡ ಯಾರೂ ಸ್ಪಂದಿಸಿಲ್ಲ. ಹೀಗಾಗಿ ಕಣ್ಣೀರು ಹಾಕುತ್ತಲೇ ನೀಲಮ್ಮ ತಮ್ಮ ಅಳಲು ತೊಡಿಕೊಂಡಿದ್ದಾರೆ. ನಾನು ಸತ್ತರೂ ಇದೇ ದೇಸ್ಥಾನದಲ್ಲಿ ಮಣ್ಣು ಮಾಡಿಬಿಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನೀಲಮ್ಮ ಅವರಿಗೆ ಬಿಪಿ, ಶುಗರ್ ಕಾಯಿಲೆ ಇದ್ದು, ಇವರ ಸಂಬಂಧಿಕರು ಯಾರೂ ಇಲ್ಲ. ಮನೆ ಬಿದ್ದಾಗ ಅಧಿಕಾರಿಗಳು 50 ಸಾವಿರ ರೂ. ನೀಡಿ ಕೈ ತೊಳೆದುಕೊಂಡಿದ್ದಾರೆ. ನಂತರ ಈವರೆಗೆ ಹೆಚ್ಚಿನ ಪರಿಹಾರ ನೀಡಿಲ್ಲ. ಹೀಗಾಗಿ ನೀಲಮ್ಮ ಅವರ ಜೀವನ ಬೀದಿ ಪಾಲಾಗಿದೆ. ಈ ಕುರಿತು ಗ್ರಾಮಸ್ಥರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *