16 ಲಕ್ಷ ರೂ. ತೆರಿಗೆ ಉಳಿಸಲು ಹೋಗಿ 27.68 ಲಕ್ಷ ರೂ. ದಂಡ ತೆತ್ತ

Public TV
1 Min Read

– ಜಾರ್ಖಂಡ್‍ನಲ್ಲಿ 2.5 ಕೋಟಿ ರೂ. ಕಾರು ಖರೀದಿ

ಗಾಂಧಿನಗರ: 16 ಲಕ್ಷ ರೂ. ತೆರಿಗೆ ಉಳಿಸಲು ಹೋಗಿ ಕಾರು ಮಾಲೀಕನೋರ್ವ 27.68 ಲಕ್ಷ ರೂ. ದಂಡ ಪಾವತಿಸಿದ ಪ್ರಸಂಗವೊಂದು ಗುಜರಾಜ್‍ನ ಅಹಮದಾಬಾದ್ ನಗರದಲ್ಲಿ ನಡೆದಿದೆ.

ಅಹಮದಾಬಾದ್‍ನ ರಂಜಿತ್ ದೇಸಾಯಿ ಎಂಬವರು 16 ಲಕ್ಷ ರೂ.ಗಳ ತೆರಿಗೆ ಉಳಿಸಲು ಜಾರ್ಖಂಡ್‍ನಲ್ಲಿ 2.18 ಕೋಟಿ ರೂ.ಗೆ ಪೋರ್ಷೆ -911 ಕಾರನ್ನು ಖರೀದಿಸಿ ಅಲ್ಲಿಂದ ಪಾಸ್ ಪಡೆದರು. ಆದರೆ ಟ್ರಾಫಿಕ್ ಪೊಲೀಸರು ಕಾರನ್ನು ನವೆಂಬರ್ 29 ರಂದು ಅಹಮದಾಬಾದ್ ಹೆಲ್ಮೆಟ್ ಸರ್ಕಲ್‍ನಲ್ಲಿ ತಡೆದು ಪರಿಶೀಲನೆ ನಡೆಸಿದ್ದರು. ಈ ವೇಳೆ ರಂಜಿತ್ ದೇಸಾಯಿ ಯಾವುದೇ ದಾಖಲೆಗಳನ್ನು ಹಾಗೂ ನಂಬರ್ ಪ್ಲೇಟ್ ಅನ್ನು ಹೊಂದಿರಲಿಲ್ಲ. ಇದರಿಂದಾಗಿ ಪೊಲೀಸರು ಕಾರನ್ನು ತಮ್ಮ ವಶಕ್ಕೆ ಪಡೆದಿದ್ದರು.

ಕಾರಿನ ಮಾಲೀಕ ರಂಜಿತ್ ದೇಸಾಯಿ ಅವರಿಂದ ದಂಡವನ್ನು ವಸೂಲಿ ಮಾಡುವ ಪ್ರಕ್ರಿಯೆ ನವೆಂಬರ್‍ನಲ್ಲಿ ಪ್ರಾರಂಭವಾಯಿತು. ಈ ಪ್ರಕರಣ ನಡೆದ ಸುಮಾರು ಒಂದೂವರೆ ತಿಂಗಳ ನಂತರ ಇತ್ಯರ್ಥವಾಗಿರಲಿಲ್ಲ. ಹೀಗಾಗಿ ದಂಡದ ಮೊತ್ತ, ತೆರಿಗೆ ಮತ್ತು ದಂಡ ಬಡ್ಡಿ ಸೇರಿದಂತೆ ಒಟ್ಟು 27.68 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದಾರೆ.

ದಂಡದ ಮೊತ್ತ?:
ದಂಡ ಮೊತ್ತ 4 ಲಕ್ಷ ರೂ. ಆಗಿದ್ದು, ರಸ್ತೆ ತೆರಿಗೆಗೆ 16 ಲಕ್ಷ ರೂ. ಸಂಗ್ರಹಿಸಲಾಗಿದೆ. ಇದಲ್ಲದೆ ದಂಡದ ಬಡ್ಡಿಯನ್ನು ನವೆಂಬರ್ ನಲ್ಲಿ ಆರಂಭಿಸಲಾಗಿದ್ದು, ಅದರ ಮೊತ್ತವು 7.68 ಲಕ್ಷ ರೂ. ಆಗಿದೆ. ಈ ಎಲ್ಲ ಮೊತ್ತ ಸೇರಿ ಒಟ್ಟು 27.68 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಸಂಚಾರ ಡಿಸಿಪಿ ಅಜಿತ್ ರಾಜನ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *