ಅಬ್ಬಾಬ್ಬ ಇದೇನ್ ಅವಧೂತರ ಅವತಾರ- ಇದು ನಿಜ “ಹುಲಿಯಾ”?

Public TV
1 Min Read

ಬೆಂಗಳೂರು: ಅವಧೂತ ವಿನಯ್ ಗುರೂಜಿ ವ್ಯಾಘ್ರ ಚರ್ಮದ ಮೇಲೆ ಕುಳಿತು ಹೊಸ ವಿವಾದ ಸೃಷ್ಟಿಸಿದ್ದಾರೆ. ಹೌದು ಹುಲಿಯ ಚರ್ಮದಲ್ಲಿ ಕೂತ ಅವಧೂತ ವಿನಯ್ ಗುರೂಜಿ ಫೋಟೋ ವೈರಲ್ ಆಗಿದೆ.

ತಾನು ಅಹಿಂಸವಾದಿ, ಸರಳ ಮನುಷ್ಯ, ಗಾಂಧಿವಾದಿ ಎನ್ನುವ ವಿಜಯ್ ಗುರೂಜಿ ಪೂರ್ಣ ಪ್ರಮಾಣದ ಅಸಲಿ ಹುಲಿಯ ಚರ್ಮದ ಮೇಲೆ ಕುಳಿತ ಫೋಟೋ ಈಗ ಪ್ರಾಣಿಪ್ರಿಯರ ಕೆಂಗಣ್ಣಿಗೆ ಕಾರಣವಾಗಿದೆ. ಹುಲಿಯ ಚರ್ಮ ಗುರೂಜಿ ಆಶ್ರಮದಲ್ಲಿ ಹೇಗೆ ಅನ್ನುವ ಪ್ರಶ್ನೆ, ಇದು ಕಾನೂನುಬಾಹಿರ ಅನ್ನೋದು ಗೊತ್ತಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಭಕ್ತರಿಂದ ಸ್ಪಷ್ಟನೆಯೂ ಸಿಕ್ಕಿದೆ.

ಅಮರೇಂದ್ರ ಎಂಬವರು ವನ್ಯ ಪ್ರಾಣಿ ವಿಭಾಗದಿಂದ ಅನುಮತಿ ಪಡೆದುಕೊಂಡು ಎಂಬತ್ತು ವರ್ಷ ಹಳೆಯ ಹುಲಿ ಚರ್ಮವನ್ನು ಆಶ್ರಮಕ್ಕೆ ಗೌರವ ಪೂರ್ವಕವಾಗಿ ಕೊಡುಗೆಯಾಗಿ ನೀಡಿದ್ದಾರೆ. ಇಲಾಖೆಯಿಂದ ಅನುಮತಿ ಸಿಕ್ಕಿದೆ ಅಂತಾ ಸ್ಪಷ್ಟನೆ ನೀಡಲಾಗಿದೆ. ಸ್ಪಷ್ಟನೆ ನೀಡಿದರೂ ಇದು ಸರಿಯಲ್ಲ, ಸಮಾಜಕ್ಕೆ ಮಾದರಿ ಆಗಬೇಕಾದವರು ಈ ರೀತಿ ಮಾಡೋದು ತಪ್ಪು ಎಂದು ಪ್ರಾಣಿಪ್ರಿಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *