ವಾರದೊಳಗೆ ಸಿಎಂ ಉಡುಪಿಗೆ ಮೂರು ಬಾರಿ ಪ್ರವಾಸ

Public TV
1 Min Read

ಉಡುಪಿ: ಕಳೆದ ಒಂದು ವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉಡುಪಿಗೆ ಮೂರನೇ ಬಾರಿಗೆ ಆಗಮಿಸುತ್ತಿದ್ದಾರೆ. ಇಂದು ಜಿಲ್ಲೆಯಲ್ಲಿ ಮೂರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಳಗ್ಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಕುಂದಾಪುರಕ್ಕೆ ಬಂದಿಳಿಯಲಿದ್ದು, 11 ಗಂಟೆಗೆ ಕೊಟದಲ್ಲಿ ದಕ್ಷಿಣಕನ್ನಡ ಉಡುಪಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಅತೀದೊಡ್ಡ ಹೊಳಪು ಕ್ರೀಡಾಕೂಟದ ಉದ್ಘಾಟನಾ ಮಾಡಲಿದ್ದಾರೆ. 11.30ಕ್ಕೆ ಕುಂದಾಪುರದಲ್ಲಿ ರಾಜ್ಯಮಟ್ಟದ ಬ್ರಾಹ್ಮಣ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

ಕುಂದಾಪುರದ ಕಾರ್ಯಕ್ರಮ ಮುಗಿಸಿ, ಅಲ್ಲಿಂದ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡು ಸಂಜೆ 4 ಗಂಟೆಗೆ ಮತ್ತೆ ಶಿವಮೊಗ್ಗ ಲೊಕಸಭಾ ಕ್ಷೇತ್ರ ಉಡುಪಿ ಜಿಲ್ಲೆ ಬೈಂದೂರಿಗೆ ಆಗಮಿಸಿ 300 ಕೋಟಿ ರುಪಾಯಿಗಳ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಮುಗಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಪೇಜಾವರಶ್ರೀ ಅನಾರೋಗ್ಯಕ್ಕೀಡಾದಾಗ ಉಡುಪಿಗೆ ಬಂದಿದ್ದ ಸಿಎಂ ಯಡಿಯೂರಪ್ಪ, ಡಿಸೆಂಬರ್ 25ಕ್ಕೆ ಕೃಷ್ಣಮಠದಲ್ಲಿ ಚಿಣ್ಣರ ಸಂತರ್ಪಣೆ, ಕುತ್ಯಾರು ಎಂಬಲ್ಲಿ ಯಾಗ, ಕಾಪು ತಾಲೂಕು ಪೊಲಿಪು ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *