ಭಾರತ್ ಮಾತಾ ಕೀ ಜೈ ಎಂದವರಿಗೆ ರಕ್ಷಣೆ: ಪ್ರಭು ಸ್ವಾಮೀಜಿ

Public TV
1 Min Read

ಬೆಳಗಾವಿ: ನಮ್ಮ ಹೋರಾಟ ಮುಸ್ಲಿಂ, ಅಹಿಂದ ವಿರುದ್ಧ ಅಲ್ಲ, ಭಾರತದ ವಿರೋಧಿಗಳ ವಿರುದ್ಧ. ಬೋಲೋ ಭಾರತ್ ಮಾತಾ ಕೀ ಜೈ ಎನ್ನುತ್ತಾರೋ ಅವರಿಗೆ ರಕ್ಷಣೆ ಕೊಡುತ್ತೇವೆ ಎಂದು ಇಂತಗಿಯ ಹುಕ್ಕೇರಿ ಮಠದ ಪ್ರಭು ಸ್ವಾಮೀಜಿ ಹೇಳಿದ್ದಾರೆ.

ಭಾರತೀಯ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಭಜರಂಗದಳ, ಶ್ರೀರಾಮಸೇನೆ, ಶ್ರೀರಾಮಸೇನೆ ಹಿಂದುಸ್ತಾನದಿಂದ ನಗರದ ಬೋಗಾರವೇಸ್ ನಿಂದ ಬೃಹತ್ ಪ್ರತಿಭಟನೆ ನಡೆಸಿ ನಂತರ ಸರ್ದಾರ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದರು. ಹಿಂದೂಗಳು ಸುಮ್ಮನ್ನಿದ್ದಾರೆ ಎಂದರೆ ಅದು ದೌರ್ಬಲ್ಯವಲ್ಲ. ಸನಾತನ ಹಿಂದೂ ಸಂಸ್ಕøತಿ ನೀಡಿರುವ ಸಂಸ್ಕಾರ ಎಂದರು.

ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಗೆ ಹುಚ್ಚು ಹಿಡಿದಿದೆ. ಅವರನ್ನು ಬಾಂಗ್ಲಾದೇಶಕ್ಕೆ ಬಿಡುವುದು ಒಳ್ಳೆಯದು. ಅವರಿಗೆ ಹುಚ್ಚು ಹಿಡಿದಿದ್ದರಿಂದ ಸಿಎಎಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ಕೆಲ ರಾಜಕೀಯ ವಿರೋಧಿಗಳು ಭಾರತೀಯ ಮುಸ್ಲಿಮರಿಗೆ ತೊಂದರೆಯಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಮುಸ್ಲಿಮರು ಆತಂಕಪಡುವ ಅಗತ್ಯವಿಲ್ಲ ಎಂದರು.

ವಿದೇಶಗಳಲ್ಲಿನ ಹಿಂದು, ಜೈನ್, ಸಿಖ್ ಸೇರಿದಂತೆ ಆರು ಧರ್ಮದವರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಸಿಎಎ ಜಾರಿ ಮಾಡಲಾಗಿದೆ. ಖುರಾನ್ ಮೇಲೆ ಆಣೆ ಮಾಡುತ್ತೇವೆ ಭಾರತದಲ್ಲಿರುವ ಮುಸ್ಲಿಮರಿಗೆ ಏನೂ ತೊಂದರೆ ಇಲ್ಲ. ಆದರೆ ಅಕ್ರಮವಾಗಿ ಭಾರತಕ್ಕೆ ನುಸುಳಿ ಬಂದಿದ್ದರೆ ಬಿಡುವುದಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *