ಟಾಟಾಏಸ್‍ಗೆ ಡಿಕ್ಕಿ ಹೊಡೆದು ಸೇತುವೆ ಕೆಳಗೆ ಬಿದ್ದ ಬೈಕ್ – ಅಯ್ಯಪ್ಪ ಭಕ್ತನ ಸಾವು

Public TV
1 Min Read

ಚಿಕ್ಕಬಳ್ಳಾಪುರ: ಟಾಟಾ ಏಸ್ ಗೆ ಬೈಕ್ ಡಿಕ್ಕಿ ಹೊಡೆದು ಸೇತುವೆ ಕೆಳಗೆ ಬೈಕ್ ಬಿದ್ದ ಪರಿಣಾಮ ಅಯ್ಯಪ್ಪ ಮಾಲಾಧಾರಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮುದುಗೆರೆ ಗ್ರಾಮದ ಬಳಿ ನಡೆದಿದೆ.

ರಮಾಪುರ ಗ್ರಾಮದ 27 ವರ್ಷದ ರಾಜೇಶ್ ಮೃತ ಬೈಕ್ ಸವಾರ. ರಮಾಪುರ ಗ್ರಾಮದಿಂದ ಗೌರಿಬಿದನೂರು ನಗರದ ಅಯ್ಯಪ್ಪನ ಸನ್ನಿಧಾನಕ್ಕೆ ರಾಜೇಶ್ ತೆರಳುತ್ತಿದ್ದರು. ಟಾಟಾ ಏಸ್ ವಾಹನ ಕಾದಲವೇಣಿ ಬಳಿಯ ಗ್ಯಾಸ್ ಗೋಡಾನ್ ನಿಂದ ಎಲ್.ಪಿ.ಜಿ ಸಿಲಿಂಡರ್ ಗಳನ್ನ ತುಂಬಿಕೊಂಡು ಕೋಟಾಲದಿನ್ನೆ ಕಡೆಗೆ ಸಾಗಿತ್ತು. ಮುದುಗೆರೆ ಬಳಿ ಸೇತುವೆ ಕಾಮಗಾರಿ ನಡೆಯುತ್ತಿದ್ದ ಪರಿಣಾಮ ಕಿರಿದಾದ ಸೇತುವೆ ಮೇಲೆ ವೇಗವಾಗಿ ಬಂದ ಬೈಕ್ ಸವಾರ ಟಾಟಾ ಏಸ್ ಗೆ ಡಿಕ್ಕಿ ಹೊಡೆದು ಸೇತುವೆ ಕೆಳಗೆ ಬೈಕ್ ಉರುಳಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದೇ ವೇಳೆ ಟಾಟಾ ಏಸ್ ವಾಹನ ಸಹ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಸಿಲಿಂಡರ್ ಗಳಿಗೆ ಹಾನಿಯಾಗಿಲ್ಲ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *