ರಣಹೇಡಿ: ಕಥೆಗೆ ಮನಸೋತು ಕಾಸು ಹೂಡಿದ ಸುರೇಶ್ ಸಾಹಸ!

Public TV
1 Min Read

ನ್ನಡ ಚಿತ್ರರಂಗದಲ್ಲಿ ಹೊಸ ಆಲೋಚನೆಯ ಪ್ರಕ್ರಿಯೆಗೆ ಯಾವ ಭಂಗವೂ ಇಲ್ಲ. ಆಗಾಗ ಸಿದ್ಧ ಸೂತ್ರದ ಚಿತ್ರಗಳ ಅಲೆಗೆದುರಾಗಿ ಇಂತಹ ಪ್ರಯೋಗಾತ್ಮಕ ಚಿತ್ರಗಳು ತೆರೆಗಾಣುತ್ತಿರುತ್ತವೆ. ಆದರೆ ಅದೆಷ್ಟೋ ಒಳ್ಳೆ ಕಥೆಗಳು, ಭಿನ್ನ ಆಲೋಚನೆಗಳು ಎಲ್ಲೆಲ್ಲೋ ಮಣ್ಣಾಗಿರುತ್ತವೆ. ಅದಕ್ಕೆ ಕಾರಣ ಅಭಿರುಚಿ ಹೊಂದಿರುವ, ವ್ಯವಹಾರವನ್ನು ಮೀರಿದ ಸಿನಿಮಾ ಪ್ರೇಮ ಹೊಂದಿರುವ ನಿರ್ಮಾಪಕರ ಕೊರತೆ. ಬಹುಶಃ ಸುರೇಶ್ ಅವರಂತಹ ಸದಭಿರುಚಿಯ ನಿರ್ಮಾಪಕರು ಸಿಗದಿದ್ದಿದ್ದರೆ ರಣಹೇಡಿ ಎಂಬ ಚಿತ್ರ ಕೂಡ ಎಲ್ಲಿಯೋ ಕಳೆದು ಹೋಗುತ್ತಿತ್ತು. ಈ ನೆಲದ ಕಂಪು ಹೊಂದಿರೋ ಈ ಕಥೆಯೂ ಕಣ್ಮರೆಯಾಗುತ್ತಿತ್ತು.

ಸುರೇಶ್ ಈ ಹಿಂದೆಯೂ ಒಂದು ಸದಭಿರುಚಿಯ ಸಿನಿಮಾ ನಿರ್ಮಾಣ ಮಾಡಿದ್ದರು. ಹೆಚ್ಚಿನ ನಿರ್ಮಾಪಕರು ಪಕ್ಕಾ ಕಮರ್ಷಿಯಲ್ ವಿಧಾನದ ಸಿನಿಮಾಗಳತ್ತ ಮಾತ್ರವೇ ಆಕರ್ಷಿತರಾಗುತ್ತಾರೆ. ಆದರೆ ಸಮಾಜಮುಖಿಯಾದ, ಪ್ರೇಕ್ಷಕರಿಗೆ ದಾಟಿಕೊಳ್ಳಲೇ ಬೇಕಾದ ಕಥೆಯನ್ನೊಳಗೊಂಡಿರೋ ಸಿನಿಮಾಗಳತ್ತ ಒಲವು ಹೊಂದಿರುವವರು ಕಡಿಮೆಯೇ. ಆದರೆ ಸುರೇಶ್ ಅವರದ್ದು ಭಿನ್ನ ಅಭಿರುಚಿ. ವ್ಯಾಪಾರ-ವಹಿವಾಟುಗಳ ಪಾಡು ಏನೇ ಆದರೂ ತಾವು ನಿರ್ಮಾಣ ಮಾಡೋ ಸಿನಿಮಾಗಳು ಮಹತ್ವದ ಸಂದೇಶ ಕೊಡುವಂತಿರಬೇಕೆಂಬುದು ಸುರೇಶ್ ಅವರ ಅಭಿಲಾಷೆ. ಈ ಕಾರಣದಿಂದಲೇ ಮನು ಕೆ ಶೆಟ್ಟಿಹಳ್ಳಿಯವರ ಕಥೆಯನ್ನು ಮೆಚ್ಚಿಕೊಂಡು ರಣಹೇಡಿಯ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ.

ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಿನಂತೆ ಮೂಡಿ ಬಂದಿದೆ ಎಂಬ ಭರವಸೆ ಸುರೇಶ್ ಅವರಲ್ಲಿದೆ. ಅವರು ಈ ಕಥೆಯನ್ನು ಇಷ್ಟೊಂದು ಇಷ್ಟಪಟ್ಟು ನಿರ್ಮಾಣ ಮಾಡೋ ರಿಸ್ಕ್ ತೆಗೆದುಕೊಳ್ಳಲು ಕಾರಣವಾಗಿರೋದು ಅದರಲ್ಲಿರೋ ಮಣ್ಣಿನ ಘಮ. ಇಲ್ಲಿ ರೈತಾಪಿ ವರ್ಗದ ತಲ್ಲಣಗಳ ಕಥೆಯಿದೆ. ಹೊಲದಿಂದ ಮೊದಲ್ಗೊಂಡು ಆ ರೈತಾಪಿ ವರ್ಗದ ಜೀವನ ಪದ್ಧತಿ, ಮರೆಯಾಗುತ್ತಿರೋ ಅಮೂಲ್ಯ ಆಚರಣೆಗಳನ್ನು ಕೂಡ ಪುನರ್ ಸೃಷ್ಟಿಸಿ ಈ ಜನರೇಷನ್ನಿಗೆ ತಲುಪಿಸುವಲ್ಲಿಯೂ ರಣಹೇಡಿ ಮಹತ್ವದ ಪಾತ್ರ ವಹಿಸಲಿದೆ. ಈ ಎಲ್ಲ ಕಾರಣದಿಂದ ಮಹತ್ವದ್ದಾಗಿ ಗುರುತಿಸಿಕೊಂಡಿರುವ ಈ ಚಿತ್ರ ಇದೇ ತಿಂಗಳ 29ರಂದು ಬಿಡುಗಡೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *