ನೀನು ಸಿಂಗಲ್ ಬ್ಲಡ್‍ಗೆ ಹುಟ್ಟಿದ್ದಾ ಅಥವಾ ಕ್ರಾಸ್ ಬ್ಲಡ್‍ಗೆ ಜನಿಸಿದ್ದಾ – ಪ್ರಾಂಶುಪಾಲ ಅಸಭ್ಯ ವರ್ತನೆ

Public TV
1 Min Read

– ಹಿಂದಿನ ಜನ್ಮದಲ್ಲಿ ಪತಿ-ಪತ್ನಿಯಾಗಿ ಹುಟ್ಟಿದ್ವಿ ಎಂದು ಕಿರುಕುಳ
– ಚೆನ್ನಾಗಿ ಕಾಣ್ತೀಯಾ ಎಂದು ಮುತ್ತು ಕೊಡ್ತಾನೆ

ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಧನಂಜಯ್ ಅನುಚಿತವಾಗಿ ವರ್ತಿಸಿದ ಪ್ರಾಂಶುಪಾಲ. ಪ್ರಾಂಶುಪಾಲ ವಿದ್ಯಾರ್ಥಿನಿಯರ ಬಳಿ, “ನೀನು ಸಿಂಗಲ್ ಬ್ಲಡ್‍ಗೆ ಹುಟ್ಟಿದ್ದಾ ಅಥವಾ ಕ್ರಾಸ್ ಬ್ಲಡಾ” ಎಂದು ಪ್ರಶ್ನೆ ಕೇಳುತ್ತಾರೆ. ಅಲ್ಲದೆ ಸುಂದರವಾದ ವಿದ್ಯಾರ್ಥಿನಿಯರನ್ನು ಕಂಡರೆ ನಾನು ನೀನು ಹಿಂದಿನ ಜನ್ಮದಲ್ಲಿ ಗಂಡ-ಹೆಂಡತಿಯಾಗಿ ಹುಟ್ಟಿದ್ವಿ ಎಂದು ಹೇಳುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.

ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯರಿಗೆ, “ನೀನು ಚೆನ್ನಾಗಿ ಕಾಣುತ್ತಿಯಾ’ ಎಂದು ಹೇಳಿ ಕೆನ್ನೆಗೆ ಮುತ್ತು ಕೂಡ ನೀಡುತ್ತಾನೆ. ಇತರ ಶಿಕ್ಷಕರೊಂದಿಗೆ ಮಾತಾಡಿದರೂ ಸಂಬಂಧ ಕಲ್ಪಿಸುತ್ತಾನೆ, ಕೆಟ್ಟ ಪದಗಳಿಂದ ನಿಂದಿಸುತ್ತಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಶಿಕ್ಷಕನ ದುರ್ವತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಇಂದು ಪೋಷಕರು ಬಂದು ವಿಚಾರಿಸಿದಾಗ ಪ್ರಾಂಶುಪಾಲ ಧನಂಜಯ್ ವಸತಿ ಶಾಲೆಯಿಂದ ಪರಾರಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *