ಕೊಟ್ಟಿಗೆಯಲ್ಲಿ ಸಿಕ್ತು ದೇವಿ ಮೂರ್ತಿ – ದೇವಸ್ಥಾನ ಕಟ್ಟಿಸಿದ ಭಕ್ತರು

Public TV
1 Min Read

ಧಾರವಾಡ: ಇದು ಜನ ಮರಳೋ ಜಾತ್ರೆ ಮರಳೋ ಎಂಬಂತಿದೆ. ಯಾಕೆಂದರೆ ಧಾರವಾಡದ ದುಂಡಿ ಓಣಿಯಲ್ಲಿ ದೇವಿ ಉದ್ಭವವಾಗಿದ್ದಾಳೆ ಎಂದು ಅಲ್ಲಿನ ಜನ ಹೇಳುತಿದ್ದಾರೆ. ಹೌದು, ಧಾರವಾಡ ನಗರದ ಹೊಸಯಲ್ಲಾಪೂರದ ದುಂಡಿ ಓಣಿಯಲ್ಲಿರುವ ಯಲ್ಲನಗೌಡ ಪಾಟೀಲರ ಮನೆಯಲ್ಲಿ ಈ ಪವಾಡ ನಡೆದಿದೆ.

ದೀಪಾವಳಿ ಪಾಂಡ್ಯಮಿಯ ದಿನ ಮನೆಗೆ ಬಂದ ಅಪರಿಚಿತ ಮಹಿಳೆಯೋರ್ವಳು ದನದ ಕೊಟ್ಟಿಗೆ ಹತ್ತಿರ ಇರುವ ಜಾಗದಲ್ಲಿ ನಿಂತು, ಇಲ್ಲಿ ಗೋಡೆಯ ಮೇಲೆ ದ್ಯಾಮವ್ವ ದೇವಿ ಇದ್ದಾಳೆ ಎಂದು ಹೇಳಿದ್ದಳಂತೆ. ಇದನ್ನು ನಂಬಿದ ಆ ಮನೆಯವರು ದನದ ಕೊಟ್ಟಿಗೆಯನ್ನು ತೆಗದು ತೆಗೆದು ನೋಡಿದರೆ ಅಲ್ಲಿ ದೇವಿಯ ಪಾದಗಳು ಅವರಿಗೆ ಸಿಕ್ಕಿವೆ.

ನಂತರ ಕಲ್ಲಿನ ಮೇಲೆ ಮೂರ್ತಿ ಕೆತ್ತನೆ ಮಾಡಿದ್ದು ಸಿಕ್ಕಿದೆ. ಇದು ಸಿಕ್ಕಿದ್ದೇ ತಡ ಎಲ್ಲ ಜನರು ಹಾಗೂ ಮನೆಯವರು ಇದೊಂದು ಪವಾಡ ಎಂದು ತಿಳಿದು ಮನೆಯಲ್ಲಿ ದೇವಿ ನೋಡಲು ಈಗ ಜನಸಾಗರವೇ ಹರಿದು ಬರುತ್ತಿದ್ದು, ಪ್ರತಿ ದಿನ ಪೂಜೆ ಪುನಸ್ಕಾರ ಆರಂಭವಾಗಿದೆ. ಈ ಮನೆಯವರು ದೇವಿ ಸಿಕ್ಕ ಜಾಗದಲ್ಲಿ ಸಣ್ಣ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *