ಮಹಿಳಾ ಟೆಲಿಕಾಲರ್ ಮೂಲಕ ಕರೆ ಮಾಡಿಸಿ ವಂಚಿಸುತ್ತಿದ್ದವನ ಬಂಧನ

Public TV
1 Min Read

ರಾಮನಗರ: ನಿಮಗೆ ಗಿಫ್ಟ್ ಅಫರ್ ಬಂದಿದೆ ಅದನ್ನು ಅಂಚೆಗೆ ಕಳುಹಿಸುತ್ತೇವೆ. ಅಲ್ಲಿ ಹಣ ಕೊಟ್ಟು ಪಡೆದುಕೊಳ್ಳಿ ಎಂದು ಮಹಿಳಾ ಟೆಲಿಕಾಲರ್ ಮೂಲಕ ಹೇಳಿಸಿ ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಮ್ಮ ಡಾಟಾ ಬೇಸ್‍ನಲ್ಲಿರುವ ಮೊಬೈಲ್ ನಂಬರ್ ಗಳ ಪೈಕಿ ನಿಮ್ಮ ಮೊಬೈಲ್ ಸಂಖ್ಯೆ ಲಕ್ಕಿ ಡ್ರಾನಲ್ಲಿ ಆಯ್ಕೆಯಾಗಿದೆ. ನಿಮ್ಮ ಹೆಸರಿಗೆ ಮೊಬೈಲ್ ಹಾಗೂ ಇನ್ನಿತರ ವಸ್ತುಗಳು ಬಹುಮಾನವಾಗಿ ಬಂದಿದೆ. ಅಂಚೆ ಕಚೇರಿಯಲ್ಲಿ ಹಣ ಕೊಟ್ಟು ಬಿಡಿಸಿಕೊಳ್ಳಿ ಎಂದು ಜನರನ್ನು ವಂಚಿಸುತ್ತಿದ್ದ ಆರೋಪಿಯನ್ನು ರಾಮನಗರ ಜಿಲ್ಲೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐವಾರ ಗ್ರಾಮದ ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ. ಬಂಧಿತನಿಂದ 27 ಮೊಬೈಲ್, ಲ್ಯಾಪ್‍ಟಾಪ್, ಕಂಪ್ಯೂಟರ್, ಪ್ರಿಂಟರ್, 130 ತರಕಾರಿ ಕಟರ್ ಸೇರಿದಂತೆ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈತ ಮೈಸೂರು ಹಾಗೂ ಕೋಲಾರದಲ್ಲಿ ಕಾಲ್‍ಸೆಂಟರ್ ಗಳನ್ನು ತೆರೆದು ಮಹಿಳಾ ಟೆಲಿಕಾಲರ್ ಗಳ ಮೂಲಕ ಜನರನ್ನು ಸೆಳೆದು ನಂತರ ಪಾರ್ಸಲ್‍ನಲ್ಲಿ ತರಕಾರಿ ಕಟರ್ ಗಳನ್ನು ಕಳುಹಿಸಿ ಜನರನ್ನು ವಂಚಿಸುತ್ತಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *