ಪಶುಸಂಗೋಪನಾ ಇಲಾಖೆಯಲ್ಲಿ ಭ್ರಷ್ಟಾಚಾರ – ಬೀದರ್‌ನಲ್ಲಿ ಫಲಾನುಭವಕ್ಕೆ ಕೊಡ್ಬೇಕು ಲಂಚ

Public TV
1 Min Read

– ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಹಾಯಕ ನಿರ್ದೇಶಕ

ಬೀದರ್: ಗಡಿ ಜಿಲ್ಲೆಯ ಪಶುಸಂಗೋಪನಾ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಆದರೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಹೈನುಗಾರಿಕೆಗೆ ಆಯ್ಕೆಯಾದ ಫಲಾನುಭವಿಗಳ ಯೋಜನೆ ಚೆಕ್ ನೀಡಬೇಕು ಅಂದರೆ ಲಂಚ ನೀಡಬೇಕು. ಈ ಪಶು ಅಧಿಕಾರಿ ಫಲಾನುಭವಿಗಳಿಂದ ಲಂಚ ತೆಗೆದುಕೊಳ್ಳುತ್ತಿರುವ ಎಕ್ಸ್ ಕ್ಲೂಸೀವ್ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

2018-19 ಸಾಲಿನ ಹೈನುಗಾರಿಕೆ ಯೋಜನೆಯಲ್ಲಿ ವಿವಿಧ ಭಾಗ್ಯಗಳಿಗೆ ಆಯ್ಕೆಯಾದ ಫಲಾನುಭವಿಗಳಿಗೆ ಚೆಕ್ ನೀಡಲು ಪಶುಇಲಾಖೆ ಸಹಾಯಕ ನಿರ್ದೇಶಕ ಓಂಕಾರ್ ಪಾಟೀಲ್ ಲಂಚ ಪೀಕುತಿದ್ದಾರೆ.

ಭ್ರಷ್ಟಾಚಾರದ ಸಂಭಾಷಣೆ
ಸಹಾಯಕ ನಿರ್ದೇಶಕ: ಎಂತ್ತೆಂತ ಮಂದಿ ಕೋಡತ್ತಾವೋ ಯಪ್ಪ…
ಫಲಾನುಭವಿ: ಇಲ್ಲಾ ರೀ ಸರ್…
ಸಹಾಯಕ ನಿರ್ದೇಶಕ: ಡೈರೆಕ್ಟ್ ಆಗಿ ಹಾಕೋಟ್ಟಿದ್ದೇನ್ ರೀ.. ನಾನು ಇವನ ಎದುರಿಗೆ ಹೇಳ್ತೀನಿ..
ಫಲಾನುಭವಿ: ಹ್ಞಾ.. ರೀ..
ಸಹಾಯಕ ನಿರ್ದೇಶಕ: ಕೇಲಸ ಮಾಡೋದು ಬೇಕಾಗಿಲ್ಲಾ ನೀವು ಇದಕ್ಕಾ…

ಫಲಾನುಭವಿ: ಮತ್ತ ಏನ್ ಮಾಡಂತ್ತಿರೀ…
ಫಲಾನುಭವಿ: ಇಗರೀ
ಸಹಾಯಕ ನಿರ್ದೇಶಕ: ಎರಡು ಚೀಟಿ ಬರಕೋ, ಎಮ್ಮೆ ಖರೀದಿ ಮಾಡೋದು…
ಫಲಾನುಭವಿ: ಮತ್ತೆ ಯಾಕರೀ, ಮತ್ತೆ ಯಾಕರೀ…
ಸಹಾಯಕ ನಿರ್ದೇಶಕ: ಆಆಆ… ಎಮ್ಮೆ ಖರೀದಿ ಚೀಟಿ ಮಾಡಲ್ಲಾ, ಪನಾಸ್, ಪನಾಸ್… (50 ಸಾವಿರ)ಸೆಂಬರ್ ರೂಪಾಯಿ ಬಾಂಡ್ ತಗೋ… (ನೂರು ರೂಪಾಯಿ)

ಪ್ರತಿಯೊಬ್ಬ ಫಲಾನುಭವಿಯಿಂದ 3 ರಿಂದ 5 ಸಾವಿರ ಲಂಚ ಚಾಚಿಕೊಳ್ಳುತ್ತಿದ್ದಾರೆ. ಯಾರು ಲಂಚ ನೀಡುವುದಿಲ್ಲವೋ ಅವರಿಗೆ ಚೆಕ್ ಕೊಡುತ್ತಿಲ್ಲ ಎಂದು ಸ್ಥಳೀಯ ನಿವಾಸಿ ವಿಶಾಲ್ ಹೋನ್ನಾ ದೂರಿದ್ದಾರೆ.

ಕೆಲ ದಿನಗಳ ಹಿಂದೆ ಬೀದರ್ ಗೆ ಭೇಟಿ ನೀಡಿದ್ದ ಸಚಿವ ಪ್ರಭು ಚವ್ಹಾಣ್, ಇಲಾಖೆಯಲ್ಲಿ ಸ್ವಚ್ಛಭಾರತ್ ಮಾಡುತ್ತೇವೆ ಎಂದು ಗುಡುಗಿದ್ದರು. ಆದರೆ ಇದೀಗ ದೃಶ್ಯ ಸಮೇತ ಸಾಕ್ಷಿ ಸಿಕ್ಕಿದೆ.ಈ ಹಿನ್ನೆಲೆಯಲ್ಲಿ ಸಚಿವರು ಕ್ರಮ ತೆಗೆದುಕೊಳ್ತಾರಾ ಎಂದು ಸ್ಥಳೀಯ ಹೋರಾಟಗಾರರು ಚಾಲೆಂಜ್ ಮಾಡಿದ್ದಾರೆ. ಒಟ್ಟಿನಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರ ಇಲಾಖೆಯಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ಆಗ್ತಿರೋದು ವಿಪರ್ಯಾಸದ ಸಂಗತಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *