ತಪ್ಪು ಚಲನ್ ನೀಡಿದ್ದಕ್ಕೆ ಪತ್ನಿ, ಮಕ್ಕಳೊಂದಿಗೆ ರಸ್ತೆಯಲ್ಲಿ ಧರಣಿಗೆ ಕುಳಿತ ಚಾಲಕ

Public TV
1 Min Read

ನವದೆಹಲಿ: ಪೊಲೀಸರು ನನಗೆ ತಪ್ಪು ಚಲನ್ ನೀಡಿದ್ದಾರೆ ಎಂದು ಆರೋಪಿಸಿ ಚಾಲಕನೋರ್ವ ಕುಟುಂಬ ಸಮೇತನಾಗಿ ರಸ್ತೆಯಲ್ಲಿಯೇ ಪ್ರತಿಭಟನೆ ಕುಳಿತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಹೊಸ ಟ್ರಾಫಿಕ್ ನಿಯಮ ಜಾರಿಯಾಗಿ ಒಂದೂವರೆ ತಿಂಗಳಾಗಿದೆ. ಭಾರೀ ದಂಡಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ ಬರುತ್ತಿವೆ. ದೆಹಲಿಯ ದ್ವಾರಕಾ ಸೆಕ್ಟರ್-1ರಲಿ ಸಿಗ್ನಲ್ ದಾಟಿದ್ದಕ್ಕೆ ಚಾಲಕ ಮನೀಶ್ ನಿಗೆ ಪೊಲೀಸರು ದಂಡದ ರಶೀದಿ ನೀಡಿದ್ದರು. ದಂಡದ ರಶೀದಿ ಪಡೆಯದ ಮನೀಶ್ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರ ಮೇಲೆ ನಾನು ಹಲ್ಲೆ ಮಾಡಿದ್ದೇನೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಲ್ಲದೇ ತಪ್ಪು ಚಲನ್ ಸಹ ನೀಡಿದ್ದಾರೆ ಎಂದು ದೂರಿನಲ್ಲಿ ಮನೀಶ್ ಉಲ್ಲೇಖಿಸಿದ್ದನು. ಇದನ್ನೂ ಓದಿ: ಧಾರವಾಡ-ತಪ್ಪು ಚಲನ್ ನೀಡಿದ್ದಕ್ಕೆ ಪತ್ನಿ, ಮಕ್ಕಳೊಂದಿಗೆ ರಸ್ತೆಯಲ್ಲಿ ಧರಣಿಗೆ ಕುಳಿತ ಚಾಲಕ

ಪೊಲೀಸರು ಮನೀಶ್ ವಾಹನದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದ್ದರಿಂದ, ಅಕ್ಟೋಬರ್ 2ರಿಂದ ಮನೆಯಲ್ಲಿಯೇ ಇದ್ದನು. ಭಾನುವಾರ ತನ್ನ ಕುಟುಂಬದ ಸಮೇತ ರಸ್ತೆಯಲ್ಲಿ ಬಂದ ಕುಳಿತ ಮನೀಶ್ ನ್ಯಾಯಬೇಕೆಂದು ಘೋಷಣೆ ಕೂಗಲಾರಂಭಿಸಿದ್ದಾನೆ. ರಸ್ತೆ ಮಧ್ಯೆ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಪ್ರತಿಭಟನೆಗೆ ಕುಳಿತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮನೀಶ್ ಮನವೊಲಿಸುವ ಪ್ರಯತ್ನಿಸಿದ್ದಾರೆ. ಯಾರ ಮಾತು ಕೇಳದಿದ್ದಾಗ ಪೊಲೀಸರು ಮನೀಶ್ ಮತ್ತು ಆತನ ಪತ್ನಿಯನ್ನು ರಸ್ತೆಯ ಬದಿ ಬಲವಂತವಾಗಿ ಎಳೆದು ತಂದು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಏಳು ಸೆಕೆಂಡ್ ಇರುವಾಗಲೇ ಹೋಗಿದ್ದೇನೇಯೇ ಹೊರತು ಸಿಗ್ನಲ್ ಜಂಪ್ ಮಾಡಿಲ್ಲ. ದಂಡವನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರು ಹಲ್ಲೆಯ ಆರೋಪ ಮಾಡುತ್ತಿದ್ದಾರೆ ಎಂದು ಮನೀಶ್ ಆರೋಪಿಸಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *