‘ಸಿದ್ದರಾಮಯ್ಯ ಹೇಳಿದ್ದು ನಿಜ, ಮುನಿಯಪ್ಪರನ್ನ ಸೋಲಿಸಿದ್ದು ನಾನೇ’: ಜೆಡಿಎಸ್ ಶಾಸಕ

Public TV
2 Min Read

ಕೋಲಾರ: ಕಾಂಗ್ರೆಸ್ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯರ ವಿರುದ್ಧ ಮಾಜಿ ಸಂಸದ ಮುನಿಯಪ್ಪ ಅವರು ಕೆಂಡಕಾರಿದ್ದು, ಇದರ ಬೆನ್ನಲ್ಲೇ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅವರು ಮುನಿಯಪ್ಪ ಸೋಲಿಗೆ ನಾನೇ ಕಾರಣ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಸಿದ್ದರಾಮಯ್ಯ ಅವರು ಮುನಿಯಪ್ಪ ಸೋಲಿಗೆ ಕಾರಣ ಶಾಸಕ ಶ್ರೀನಿವಾಸ್ ಗೌಡ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕರು, ನಾನೇ ಹದ್ದಾಗಿ ಕುಕ್ಕಿ ಮುನಿಯಪ್ಪ ಅವರನ್ನು ಸೋಲಿಸಿದ್ದೇನೆ. ಕೋಲಾರದಲ್ಲಿ ಮುನಿಯಪ್ಪ ಸೋಲಿಗೆ ನಾನೇ ಕಾರಣನಾಗಿದ್ದು, ನನ್ನನ್ನು 2 ಬಾರಿ ಚುನಾವಣೆಯಲ್ಲಿ ಸೋಲಿಸಿದ್ದರು. ಆದ್ದರಿಂದಲೇ ನಾನು ಅವರನ್ನು ಸೋಲಿಸಿದ್ದೇನೆ. ಮುನಿಯಪ್ಪಗೂ ಸೋಲು ಹೇಗಿರುತ್ತದೆ ಎಂದು ತೋರಿಸಲು ಎಷ್ಟು ಪ್ರಯತ್ನ ಮಾಡಬೇಕೋ ಅಷ್ಟೂ ಮಾಡಿದ್ದೇ ಎಂದು ಹೇಳಿದರು. ಇದನ್ನು ಓದಿ: ನಾನು ರಿಸೈನ್ ಮಾಡ್ತೀನಿ, ಯಾರು ಬೇಕಾದ್ರೂ ಅಧ್ಯಕ್ಷರಾಗಿ- ದಿನೇಶ್ ಗುಂಡೂರಾವ್

ಇದೇ ವೇಳೆ ಮಾಜಿ ಸಿಎಂ ಎಚ್‍ಡಿಕೆ ಅವರು ಮುನಿಯಪ್ಪ ಸೋಲಿಗೆ ಜೆಡಿಎಸ್ ಶಾಸಕರು ಕಾರಣವಲ್ಲ ಎಂದಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನೇ ಮುನಿಯಪ್ಪರ ಸೋಲಿಗೆ ಕಾರಣ ಎಂದು ಹೇಳುತ್ತಿದ್ದೇನೆ. ನಮ್ಮ ವರಿಷ್ಠರು ಯಾವ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಕೆಎಚ್ ಮುನಿಯಪ್ಪ ಅವರು ಸೋಲಿಗೆ ನಾನೇ ಕಾರಣ ಎಂದು ಹೇಳಲು ಯಾವುದೇ ಭಯ, ಭಕ್ತಿ ಇಲ್ಲ. ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕುಗಳಲ್ಲಿಯೂ ಅವರ ವಿರುದ್ಧ ಪ್ರಚಾರ ಮಾಡಿದ್ದೇನೆ ಎಂದರು. ಇದನ್ನು ಓದಿ: ‘ಹೋಗೋಲೋ ಸಿದ್ದರಾಮಯ್ಯ’ – ಸಿದ್ದು ವಿರುದ್ಧ ಮುನಿಯಪ್ಪ ಏಕವಚನದಲ್ಲೇ ಗರಂ

ಸಿದ್ದರಾಮಯ್ಯ ಹಾಗೂ ಎಚ್‍ಡಿಕೆ ನಡುವಿನ ಮಾತಿನ ಸಮಯದಲ್ಲಿ ಕೆ.ಎಚ್ ಮುನಿಯಪ್ಪ ಅವರನ್ನು ರಮೇಶ್ ಕುಮಾರ್ ಹದ್ದಾಗಿ ಕುಕ್ಕಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಅವರು, ಹಾಗಾದರೆ ಶ್ರೀನಿವಾಸ್ ಗೌಡ ಹದ್ದಾಗಿ ಕುಕ್ಕಿಲ್ವ ಎಂದು ಟಾಂಗ್ ನೀಡಿದ್ದರು.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಮುನಿಯಪ್ಪ ಅವರ ಪುತ್ರಿ, ಶಾಸಕಿ ರೂಪಕಲಾ ಅವರು, ಸತತ 35 ವರ್ಷಗಳಿಂದ ಪಕ್ಷ ಕಟ್ಟುವ ಕಾರ್ಯವನ್ನು ನಮ್ಮ ತಂದೆಯಾವರು ಮಾಡಿದ್ದಾರೆ. ಆದರೆ ಇಂದಿನ ಸಭೆಯಲ್ಲಿ ಏನು ನಡೆದಿದೆ ಎಂಬ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಆದರೆ ಕಳೆದ ಚುನಾವಣೆಯಲ್ಲಿ ಅವರಿಗೆ ಉಂಟಾದ ನೋವಿನ ಬಗ್ಗೆ ಪಕ್ಷದ ವೇದಿಕೆಯಲ್ಲಿ ತಮ್ಮದೇ ರೀತಿಯಲ್ಲಿ ಮಾತನಾಡಿರಬಹುದು ಎಂದು ಹೇಳಿದರು. ಇದನ್ನು ಓದಿ: ಮುನಿಯಪ್ಪಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗಿಲ್ಲ: ರಮೇಶ್ ಕುಮಾರ್ ವ್ಯಂಗ್ಯ

Share This Article
Leave a Comment

Leave a Reply

Your email address will not be published. Required fields are marked *