ದೇವರ ಹೆಸರಲ್ಲಿ ಕೆಜಿಎಫ್‍ನ 2 ಸಾವಿರ ಎಕರೆ ಗಣಿ ಪ್ರದೇಶ ಗುಳುಂ!

Public TV
1 Min Read

ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಚಿನ್ನದಂತ ಸರ್ಕಾರಿ ಭೂಮಿ ಕಂಡವರ ಪಾಲಾಗುತ್ತಿದೆ. ಕೆಜಿಎಫ್‍ನ ಕೃಷ್ಣಾವರಂನಲ್ಲಿ ಚಿನ್ನದ ಗಣಿಗೆ ಸೇರಿ ಭೂಮಿಯನ್ನೇ ಲೂಟಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ರಾತ್ರೋರಾತ್ರಿ ಗಣಿಗೆ ಸೇರಿದ ಭೂಮಿಗೆ ಬೇಲಿ ಹಾಕಿ ಅಲ್ಲಿ ದೇವಸ್ಥಾನ, ಚರ್ಚ್ ಕಟ್ಟುತ್ತಿದ್ದು, ಆ ಹೆಸರಲ್ಲೇ ಭೂಮಿಯನ್ನು ಲಪಟಾಯಿಸುತ್ತಿದ್ದಾರೆ. ಮೈನ್ಸ್‍ಗೆ ಸೇರಿದ 12,500 ಎಕರೆ ಭೂಮಿ ಇದೆ. ಅದರಲ್ಲಿ 2 ಸಾವಿರ ಎಕರೆಯಷ್ಟು ಭೂಮಿಯನ್ನು ಕೆಲ ಪ್ರಭಾವಿ ವ್ಯಕ್ತಿಗಳು ಮತ್ತು ಭೂಗಳ್ಳರು ಕಬಳಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಕಳೆದ ಎರಡು ತಿಂಗಳಲ್ಲಿ ಕೃಷ್ಣಾಪುರಂ, ಘಟ್ಟಕಾಮದೇನಹಳ್ಳಿ, ಪಿಚ್ಚಹಳ್ಳಿಯಲ್ಲಿ ಅಕ್ರಮ ನಡೆಯುತ್ತಿದೆ. ವಿಚಿತ್ರ ಅಂದರೆ ಕಂದಾಯ ಇಲಾಖೆ ಅಧಿಕಾರಿಗಳಿಗೇ ಈ ಬಗ್ಗೆ ಮಾಹಿತಿ ಇರಲಿಲ್ಲ. ಸದ್ಯ ಕೆಜಿಎಫ್ ತಹಶೀಲ್ದಾರ್ ಗೆ ಸ್ಥಳ ಮಹಜರು ಮಾಡಿ ವರದಿಗೆ ಸೂಚಿಸಲಾಗಿದೆ. ಈ ವಿಚಾರದಲ್ಲಿ ನಕಲಿ ದಾಖಲೆ ಸೃಷ್ಠಿಸಿ ಅಕ್ರಮ ಪ್ರವೇಶ ಮಾಡಿದ್ದೇ ಆದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುವ ಎಚ್ಚರಿಕೆ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *