ಟ್ವೀಟ್ ಮಾಡೋ ಬದಲು ಗ್ರಾಮಗಳನ್ನು ದತ್ತು ಪಡೆದುಕೊಳ್ಳಿ: ಕಾಂಗ್ರೆಸ್ಸಿಗರಿಗೆ ಸಿಟಿ ರವಿ ಟಾಂಗ್

Public TV
1 Min Read

ಚಿಕ್ಕಮಗಳೂರು: ಕಾಂಗ್ರೆಸ್ಸಿಗರೇ ನೀವು ತಾಕತ್ತಿರೋ ಜನರೇ ಇದ್ದೀರಾ. ನಿಮ್ಮ ಆಸ್ತಿ ಕೂಡ ಚಿಕ್ಕ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದು ಸದುಪಯೋಗ ಆಗಬೇಕಂದರೆ ಪುಣ್ಯದ ಕೆಲಸ ಮಾಡಬೇಕು. ಟ್ವೀಟ್ ಮಾಡೋ ಬದಲು, 5-10-20 ಗ್ರಾಮಗಳನ್ನು ದತ್ತು ಪಡೆದುಕೊಳ್ಳಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕಾಂಗ್ರೆಸ್ಸಿಗರಿಗೆ ಟಾಂಗ್ ಕೊಟ್ಟಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರೇ ನಿಮ್ಮದು ಕೇವಲ ರಾಜಕೀಯ ಅದನ್ನು ಬಿಟ್ಟು ಕಷ್ಟದಲ್ಲಿರುವವರ ನೆರವಿಗೆ ಬನ್ನಿ. ಒಳ್ಳೆಯ ಸ್ಪರ್ಧೆ ಬೆಳೆಯುತ್ತದೆ. ನೀವು 10 ಗ್ರಾಮ ಪಡೆದರೆ, ಬಿಜೆಪಿಯವರು 20 ಗ್ರಾಮ ಪಡೆಯುತ್ತಾರೆ. ನಾವೇನಾದರೂ ಮಾಡಬೇಕೆಂದು ಆ ಜೆಡಿಎಸ್‍ನವರು 8-10 ಗ್ರಾಮ ಪಡೆಯುತ್ತಾರೆ. ನಮ್ಮೆಲ್ಲರ ಸಹನೆ, ಸಿಟ್ಟನ್ನು ಕನ್ಟ್ರಷ್ಷನ್ ಆಗಿ ನಿರ್ಮಾಣ ಮಾಡೋಣ. ಪ್ರಶ್ನೆ ಮಾಡೋ ಬದಲು ಆ ರೀತಿ ಆರೋಗ್ಯಕರ ಸ್ಪರ್ಧೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ವಿಜಯನಗರವನ್ನು ಜಿಲ್ಲೆ ಮಾಡಬೇಕೆಂಬುದು ಅಲ್ಲಿನ ಶಾಸಕರ ಒತ್ತಡ ಹಾಕುತ್ತಿರುವ ವಿಚಾರವಾಗಿ ಮಾತನಾಡಿ, ಅದು ಇನ್ನೂ ಸಂಪುಟದ ಮುಂದೆ ಬಂದಿಲ್ಲ. ಆ ಸಂದರ್ಭ ಬಂದಾಗ ಅದರ ಸಾಧಕ-ಬಾಧಕ ಚರ್ಚಿಸೋಣ. ಸಿಎಂ ಅವರ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *