ವಿಡಿಯೋ: ನಿಂಬೆಹಣ್ಣು ಬಾಯಲ್ಲಿಟ್ಟುಕೊಂಡು ಸಖತ್ ಹೆಜ್ಜೆ ಹಾಕಿದ ಎಂಟಿಬಿ

Public TV
1 Min Read

ಬೆಂಗಳೂರು: ಈ ಹಿಂದೆ ನಾಗಿಣಿ ಡ್ಯಾನ್ಸ್, ಕತ್ತಿ ವರಸೆ ಮಾಡಿ ಸಖತ್ ಸುದ್ದಿಯಾಗಿದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಇದೀಗ ನಿಂಬೆಹಣ್ಣು ಬಾಯಲ್ಲಿಟ್ಟುಕೊಂಡು ಕುಣಿದು ಮತ್ತೆ ಸುದ್ದಿಯಾಗಿದ್ದಾರೆ.

ತಮಟೆ ಸದ್ದಿಗೆ ಎಂಟಿಬಿ ಭರ್ಜರಿಯಾಗಿ ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಸೂಲಿಬೆಲೆ ಕಾಲೋನಿಯಲ್ಲಿ ನಡೆದ ಗಣಪತಿ ಉತ್ಸವದಲ್ಲಿ ನಿಂಬೆಹಣ್ಣನ್ನು ಬಾಯಲ್ಲಿಟ್ಟುಗೊಂದು ಅಭಿಮಾನಿಗಳ ಜೊತೆ ಹೆಜ್ಜೆ ಹಾಕಿದ್ದಾರೆ. ಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ಅಭಿಮಾನಿಗಳು ಎಂಟಿಬಿ ಅವರನ್ನು ಆಹ್ವಾನಿಸಿದ್ದರು. ಈ ವೇಳೆ ಗಣಪನ ಮೂರ್ತಿ ಎದುರು ಎಂಟಿಬಿ ಅಭಿಮಾನಿಗಳೊಂದಿಗೆ ಫುಲ್ ಜೋಶ್‍ನಿಂದ ಕುಣಿದು ಕುಪ್ಪಳಿಸಿದ್ದಾರೆ.

ಹಾಗೆಯೇ ನಂದಗುಡಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ಕೂಡ ಎಂಬಿಟಿ ತಮಟೆ ಸದ್ದಿಗೆ ಸಖತ್ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ನಿಂಬೆಹಣ್ಣನ್ನು ಬಾಯಲ್ಲಿ ಕಚ್ಚಿಕೊಂಡು ಅಭಿಮಾನಿಗಳೊಂದಿಗೆ ನೃತ್ಯ ಮಾಡಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಈ ಹಿಂದೆ ಎಂಟಿಬಿ ಅವರು ವಸತಿ ಸಚಿವರಾಗಿದ್ದಾಗ ನಾಗಿಣಿ ಡ್ಯಾನ್ಸ್ ಮಾಡಿದ್ದರು. ಅಷ್ಟೇ ಅಲ್ಲದೆ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ತಮಟೆ ಸದ್ದಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದರು. ಡ್ಯಾನ್ಸ್ ಮಾಡುತ್ತಿದ್ದಾಗ ತಮ್ಮ ಫೇವರಿಟ್ 2 ಎಟಿನ ತಾಳ ಹಾಕುವಂತೆ ತಮಟೆ ಬಾರಿಸುವವರಿಗೆ ಹೇಳಿದ್ದರು. ಬಳಿಕ ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಯುವಕರನ್ನು ನಾಚಿಸುವಂತೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.

ಅಷ್ಟೇ ಅಲ್ಲದೆ ಕೋಲಾರ ತಾಲೂಕಿನ ಅರಾಬಿಕೊತ್ತನೂರು ಗ್ರಾಮದಲ್ಲಿ ಕುರುಬ ಸಮುದಾಯ ದೊಡ್ಡ ದ್ಯಾವರು ಉತ್ಸವವನ್ನು ಆಯೋಜಿಸಿತ್ತು. ಆ ಉತ್ಸವದಲ್ಲಿಯೂ ಎಂಟಿಬಿ ನಾಗರಾಜ್ ಕತ್ತಿ ಹಿಡಿದು ನೃತ್ಯ ಮಾಡಿ, ಎಲ್ಲರನ್ನೂ ರಂಜಿಸಿ ಹುಬ್ಬೇರುವಂತೆ ಮಾಡಿದ್ದರು.

ದೊಡ್ಡ ದ್ಯಾವರ ಉತ್ಸವವು 5 ವರ್ಷಕ್ಕೊಮ್ಮೆ ನಡೆಯುತ್ತದೆ. ಸಚಿವರ ಡ್ಯಾನ್ಸ್ ನೋಡಿದ ಜನರ ಕೂಡ ಫುಲ್ ಜೋಶ್‍ನಲ್ಲಿ ಕುಣಿದಿದ್ದರು. ಎಂಟಿಬಿ ನಾಗರಾಜ್ ಅವರು ಕತ್ತಿ ಹಿಡಿದು ಕಲಾತಂಡದ ಜೊತೆಗೆ ಹೆಜ್ಜೆ ಹಾಕುವ ಮೂಲಕ ಸಮುದಾಯದ ಜನರಿಗೆ ಸ್ಫೂರ್ತಿ ತುಂಬಿದ್ದರು.

Share This Article
Leave a Comment

Leave a Reply

Your email address will not be published. Required fields are marked *