ಮಕ್ಕಳು, ಸೊಸೆಯರ ಕಿರಿಕಿರಿಗೆ ಬೇಸತ್ತು ತಾಯಿ ಆತ್ಮಹತ್ಯೆ

Public TV
1 Min Read

– ವಿಷಯ ತಿಳಿದು ಮನೆಗೆ ಬೀಗ ಹಾಕಿ ಹೊರಗೆ ಹೋದ  ಮಕ್ಕಳು

ಹುಬ್ಬಳ್ಳಿ: ಮಕ್ಕಳು ಹಾಹೂ ಸೊಸೆಯರ ಕಿರಿಕಿರಿಗೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ.

ನೇಕಾರ ನಗರದ ನಿವಾಸಿ ಸುಶೀಲಮ್ಮ ಗಲಿಕಟ್ಟಿ (60) ಆತ್ಮಹತ್ಯೆ ಶರಣಾದ ಮಹಿಳೆ. ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ಮಕ್ಕಳು ಬೀಗ ಹಾಕಿ ಮನೆಯಿಂದ ಹೋರ ನಡೆದು ಅಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ: ಮಕ್ಕಳು, ಸೊಸೆಯರ ಕಿರುಕುಳಕ್ಕೆ ನದಿಗೆ ಹಾರಿದ ಅಜ್ಜಿ- ಗ್ರಾಮಸ್ಥರಿಂದ ರಕ್ಷಣೆ

ಸುಶೀಲಮ್ಮ ಕೆಎಸ್‍ಆರ್ ಟಿಸಿ ನೌಕರರಾಗಿದ್ದು, ಹುಬ್ಬಳ್ಳಿಯ ಹಲವೆಡೆ ಆಸ್ತಿ ಮಾಡಿದ್ದರು. ಆದರೆ ತಾಯಿಯನ್ನು ನೋಡಿಕೊಳ್ಳುವ ವಿಚಾರವಾಗಿ ಮಕ್ಕಳಾದ ಮಂಜುನಾಥ ಹಾಗೂ ರಾಜಪ್ಪ ಪದೇ ಪದೇ ಜಗಳವಾಡುತ್ತಿದ್ದರು. ಇದರಿಂದ ಮನನೊಂದ ಸುಶೀಲಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸುಶೀಲಮ್ಮ ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಹೆಣ್ಣು ಮಕ್ಕಳು ತಾಯಿ ಮನೆಗೆ ಬಂದು, ಕಣ್ಣೀರು ಹಾಕಿದ್ದಾರೆ. ನಮ್ಮ ತಾಯಿಯ ಸಾವಿಗೆ ಸಹೋದರರು ಹಾಗೂ ಅವರ ಪತ್ನಿಯರೇ ಕಾರಣ. ಅವರಿಗೆ ಆಸ್ತಿ ಬೇಕು ತಾಯಿ ಬೇಡ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ತಾಯಿಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸುಶೀಲಮ್ಮ ಅವರ ಮೃತ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *