ಚಾಕು ಹಿಡಿದು ಸಂಸತ್ ಪ್ರವೇಶಕ್ಕೆ ಮುಂದಾದ ಯುವಕ

Public TV
1 Min Read

ನವದೆಹಲಿ: ಚಾಕು ಹಿಡಿದು ಘೋಷಣೆ ಕೂಗುತ್ತಾ ಸಂಸತ್ ಪ್ರವೇಶಿಸಲು ಮುಂದಾಗಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ದೆಹಲಿಯ ಲಕ್ಷ್ಮಿ ನಗರದ ನಿವಾಸಿ ಸಾಗರ್ ಇನ್ಸ ಇಂದು ಸಂಸತ್ ಭವನ ಪ್ರವೇಶಕ್ಕೆ ಮುಂದಾಗಿದ್ದನು. ಯುವಕ ಸ್ವಾಮಿ ರಾಮ್ ರಹೀಂ ಪರ ಘೋಷಣೆ ಕೂಗುತ್ತಿದ್ದನು. ಸಾಗರ್ ತನ್ನ ಬೈಕ್ ಮೂಲಕ ಸಂಸದ್ ಪ್ರವೇಶಿಸಿದ್ದನು. ಇದೀಗ ಪೊಲೀಸರು ಯುವಕ ಮತ್ತು ಆತನ ಬಳಿಯಲ್ಲಿದ್ದ ಚಾಕು, ಬೈಕ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಾರ್ಲಿಮೆಂಟ್ ಪೊಲೀಸರ ವಶದಲ್ಲಿರುವ ಸಾಗರ್ ವಿಚಾರಣೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಂಸದ್ ಭವನದ ಬಳಿ ಬಂದ ಯುವಕ ಚಾಕು ಹಿಡಿದು ಗುರಮಿತ್ ರಾಮ್ ರಹೀಂ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದನು. ಪ್ರವೇಶ ದ್ವಾರದ ಬಳಿಯಲ್ಲಿದ್ದ ಭದ್ರತಾ ಸಿಬ್ಬಂದಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *