ರೇವಣ್ಣಗೆ ತಿರುಗಿದ ಬಾಣ: ‘ಕಮಲ’ದಿಂದ ‘ಕೈ-ತೆನೆ’ ಬೆಂಬಲಿತ ನಿರ್ದೇಶಕರು ಹೈಜಾಕ್!

Public TV
1 Min Read

– ಬಾಲಚಂದ್ರ ಜಾರಕಿಹೊಳಿಗೆ ಕೆಎಂಎಫ್ ಅಧ್ಯಕ್ಷ ಪಟ್ಟ!

ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಶನಿವಾರ (ಆಗಸ್ಟ್ 31)ರಂದು ಚುನಾವಣೆ ನಡೆಯಲಿದೆ. ಈ ಬೆನ್ನಲ್ಲೇ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ 7 ನಿರ್ದೇಶಕರನ್ನು ಕಮಲ ಪಡೆ ಹೈಜಾಕ್ ಮಾಡಿದೆ.

ಈ ಮೂಲಕ ಮಾಜಿ ಸಚಿವ, ಕೆಎಂಎಫ್ ಅಧ್ಯಕ್ಷ ಸ್ಥಾನದ ಪ್ರಭಲ ಆಕಾಂಕ್ಷಿ ಎಚ್.ಡಿ.ರೇವಣ್ಣ ಅವರದ್ದೇ ತಂತ್ರದಲ್ಲಿ ಬಿಜೆಪಿ ನಾಯಕರು ಬಿಗ್ ಶಾಕ್ ನೀಡಿದ್ದಾರೆ. ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾಂಗ್ರೆಸ್-ಜೆಡಿಎಸ್ ಬೆಂಬಲಿತ 7 ಜನ ಸೇರಿ ಒಟ್ಟು 11 ಮಂದಿ ಕೆಎಂಎಫ್ ನಿರ್ದೇಶಕರನ್ನು ಮುಂಬೈಗೆ ಶಿಫ್ಟ್ ಮಾಡಿದ್ದಾರೆ.

ಅವಿರೋಧವಾಗಿ ಆಯ್ಕೆಯಾಗಲು ಕೆಎಂಎಫ್ ನಿರ್ದೇಶಕರನ್ನು ಜಾರಕಿಹೊಳಿ ಸಹೋದರರು ಹೈಜಾಕ್ ಮಾಡಿದ್ದಾರೆ. ಈ ಪೈಕಿ ಕಾಂಗ್ರೆಸ್ 6, ಜೆಡಿಎಸ್ 1, ಬಿಜೆಪಿಯ ಅಮರನಾಥ ಜಾರಕಿಹೊಳಿ, ಸೇರಿ ಇಬ್ಬರು ನಿರ್ದೇಶಕರು ಹಾಗೂ ಶಾಸಕ  ಬಾಲಚಂದ್ರ ಜಾರಕಿಹೊಳಿ ಮುಂಬೈಗೆ ಹಾರಿದ್ದಾರೆ. ಈ ಬೆಳವಣಿಗೆಯಿಂದಾಗಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೆಎಂಎಫ್ ಅಧ್ಯಕ್ಷ ಪಟ್ಟ ಬಹುತೇಕ್ ಖಚಿತ ಎನ್ನಲಾಗುತ್ತಿದೆ.

ಕೆಎಂಎಫ್ ಬಲಾಬಲ:
ಕಾಂಗ್ರೆಸ್ ಬೆಂಬಲಿತ 8 ಜನ, ಜೆಡಿಎಸ್ ಬೆಂಬಲಿತ 3 ಮಂದಿ, ಬಿಜೆಪಿ ಬೆಂಬಲಿತ ಅಮರನಾಥ ಜಾರಕಿಹೊಳಿ ಕೆಎಂಎಫ್ ನಿರ್ದೇಶಕರಾಗಿದ್ದಾರೆ. ಸರ್ಕಾರದಿಂದ ನಾಮನಿರ್ದೇಶಕರಾಗಿ ಬಾಲಚಂದ್ರ ಜಾರಕಿಹೊಳಿ ನೇಮಕವಾಗಿದ್ದಾರೆ. ಅವರಿಗೆ ಹಾಗೂ ಮೂವರು ಅಧಿಕಾರಿಗಳಿಗೆ ಮತದಾನದ ಹಕ್ಕು ಇದೆ. ಈ ಪೈಕಿ 6 ಕಾಂಗ್ರೆಸ್, 1 ಜೆಡಿಎಸ್, 1 ಬಿಜೆಪಿ ಮತ್ತು 2 ನಾಮನಿರ್ದೇಶಕ ಅಧಿಕಾರಿಗಳ ಬೆಂಬಲ ಬಾಲಚಂದ್ರ ಜಾರಕಿಹೊಳಿ ಅವರಿಗೆ ಇದೆ. ಬಾಲಚಂದ್ರ ಜಾರಕಿಹೊಳಿ ಅವರಿಗೆ 11 ನಿರ್ದೇಶಕರ ಬೆಂಬಲ ವ್ಯಕ್ತವಾಗಿದ್ದು, ಬಹುತೇಕ ಅವಿರೋಧ ಆಯ್ಕೆ ಖಚಿತ ಎನ್ನಲಾಗುತ್ತದೆ.

ಈ ಹಿಂದೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಕೆಎಂಎಫ್ ನಿರ್ದೇಶಕರನ್ನು ಹೈಜಾಕ್ ಮಾಡಿದ್ದರು. ಇದರಿಂದಾಗಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ರೇವಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ತಕ್ಷಣವೇ ಮಧ್ಯ ಪ್ರವೇಶಿಸಿದ್ದ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರವು ಚುನಾವಣೆಯನ್ನು ಮುಂದೂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *