ದುಷ್ಕರ್ಮಿಗಳಿಂದ ಅಟ್ಟಹಾಸ – ಮೂರು ಬೈಕ್‍ಗಳಿಗೆ ಬೆಂಕಿ

Public TV
0 Min Read

ಬೆಳಗಾವಿ: ಮನೆ ಮುಂದೆ ನಿಲ್ಲಿಸಿದ್ದ 3 ಬೈಕ್‍ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಅಥಣಿ ಪಟ್ಟಣದ ಶಂಕರ ನಗರದಲ್ಲಿ ನಡೆದಿದೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಮನೆ ಮುಂದೆ ನಿಲ್ಲಿಸಿದ್ದ ಹೊಂಡಾ ಶೈನ್, ಪಲ್ಸರ್ ಹಾಗೂ ಎಚ್‍ಎಫ್ ಡಿಲಕ್ಸ್ ಬೈಕ್‍ಗಳಿಗೆ ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಈ ಪರಿಣಾಮ ಬೈಕ್‍ಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ಅಥಣಿ ಪಟ್ಟಣದ ನಿವಾಸಿಗಳಾದ ಎ.ಕೆ ದೊಡ್ಡನವರ, ವಿನೋದ್ ಕುಮಾರ್ ದೊಡ್ಡನವರ ಹಾಗೂ ರಾಮು ಬಾಡಗಿ ಅವರಿಗೆ ಸೇರಿದ ಬೈಕ್‍ಗಳಾಗಿದ್ದು, ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *