ನಾವು ರಾಬರಿ, ಕಿಡ್ನಾಪ್ ಮಾಡೋಕೆ ಬಂದಿಲ್ಲ: ಮುಂಬೈ ಹೋಟೆಲ್ ಮುಂಭಾಗ ಶಿವಲಿಂಗೇಗೌಡ

Public TV
2 Min Read

ಮುಂಬೈ: ನಮ್ಮ ಸ್ನೇಹಿತರನ್ನು ಭೇಟಿ ಮಾಡಲು ಬಂದಿದ್ದೇವೆ. ನಾವು ಇಲ್ಲಿ ದರೋಡೆ ಅಥವಾ ಕಿಡ್ನಾಪ್ ಮಾಡೋಕೆ ಬಂದಿಲ್ಲ. ಇದು ಬಿಜೆಪಿ ಹೋಟೆಲಾ, ಸಾರ್ವಜನಿಕರಿಗೆ ಬರಬೇಡಿ ಎಂದು ತಡೆಯುವುದು ತಪ್ಪು ಎಂದು ಶಾಸಕ ಶಿವಲಿಂಗೇಗೌಡ ಗರಂ ಆಗಿದ್ದಾರೆ.

ಮುಂಬೈ ಹೋಟೆಲ್ ಮುಂಭಾಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಿವಲಿಂಗೇಗೌಡ, ನಾವು ಬಂದಿರುವುದು ನಮ್ಮ ಶಾಸಕರನ್ನು ಭೇಟಿ ಮಾಡಲು. ಬಿಜೆಪಿಯವರು ನಮ್ಮ ಶಾಸಕರನ್ನು ಬಂಧನದಲ್ಲಿಟ್ಟಿದ್ದಾರೆ. ಈ ಬಗ್ಗೆ ನಮ್ಮ ಶಾಸಕರು ನಮಗೆ ಮಾಹಿತಿ ತಿಳಿಸಿದ್ದಾರೆ. ಹೀಗಾಗಿ ಬಂದಿದ್ದೇವೆ ಎಂದರು.

ಇದು ಖಾಸಗಿ ಹೋಟೆಲ್, ಜೆಡಿಎಸ್ ಎಂಎಲ್‍ಎ ಬರಬೇಡಿ, ಆ ಎಂಎಲ್‍ಎ ಬರಬೇಡಿ ಎಂದರೆ ಹೇಗೆ. ಅವರು ಈ ಹೋಟೆಲ್‍ಗೆ ಕಸ್ಟಮರ್ಸ್, ಅವರ ಪಾಡಿಗೆ ಅವರು ಇದ್ದಾರೆ. ಯಾರನ್ನಾದರೂ ಬಲವಂತವಾಗಿ ಕಿಡ್ನಾಪ್ ಮಾಡಿದರೆ ಮಾತ್ರ ಪೊಲೀಸ್ ಅವರು ಎಂಟ್ರಿ ಆಗಬೇಕು. ಆದರೆ ಈ ರೀತಿ ಹೋಟೆಲ್‍ಗೆ ಹೋಗದಂತೆ ತಡೆಯುವುದು ತಪ್ಪು ಎಂದು ಶಿವಲಿಂಗೇಗೌಡ ಆಕ್ರೊಶ ವ್ಯಕ್ತಪಡಿಸಿದರು.

ರಾತ್ರಿ ಬಿಜೆಪಿ ಅವರು ಭೇಟಿ ಮಾಡಿ ಹೋಗಿದ್ದಾರೆ. ಹೀಗಾಗಿ ನಾವು ಅವರನ್ನು ಭೇಟಿ ಮಾಡಿ, ನಿಮ್ಮನ್ನು ಬಂಧನದಲ್ಲಿಟ್ಟಿದ್ದಾರಾ ಅಥವಾ ಸ್ವತಂತ್ರವಾಗಿ ಇಟ್ಟಿದ್ದಾರಾ ಎಂದು ಕೇಳುತ್ತೇವೆ. ಬಿಜೆಪಿಯವರು ಅವರನ್ನು ಬಲವಂತವಾಗಿ ಕರೆದುಕೊಂಡು ಬಂದಿದ್ದಾರೆ. ಕಳೆದ ದಿನ ಆರ್.ಅಶೋಕ್ ಮತ್ತು ಬೋಪಯ್ಯ ಇಬ್ಬರು ಬಂದು ಬಲವಂತವಾಗಿ ದೂರು ಕೊಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು.

ನಮ್ಮ ಸ್ನೇಹಿತರನ್ನು ಭೇಟಿ ಮಾಡಿ ಅವರು ಸ್ವ-ಇಚ್ಛೆಯಿಂದ ಬಂದಿದ್ದಾರೆ ಎಂದು ತಿಳಿದುಕೊಂಡು ಹೋಗುತ್ತೇವೆ ಎಂದು ಶಿವಲಿಂಗೇಗೌಡ ಹೇಳಿದರು.

ಮುಂಬೈ ಹೋಟೆಲ್ ನಲ್ಲಿ 10 ಮಂದಿ ಅತೃಪ್ತ ಶಾಸಕರು ವಾಸ್ತವ್ಯ ಹೂಡಿದ್ದು, ರಾಜೀನಾಮೆ ಅಂಗೀಕರವಾಗುವವರೆಗೆ ಬೆಂಗಳೂರಿಗೆ ವಾಪಸ್ ಬರಲ್ಲ ಎಂದು ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಚಿವ ಡಿಕೆ ಶಿವಕುಮಾರ್, ಶಾಸಕ ಶಿವಲಿಂಗೇಗೌಡ ಹಾಗೂ ಸಚಿವ ಜಿ.ಟಿ ದೇವೇಗೌಡ ಅವರು ಮುಂಬೈಗೆ ತೆರಳಿದ್ದರು. ಆದರೆ ಇದೀಗ ಅವರನ್ನು ಹೋಟೆಲ್ ಒಳಗಡೆ ಬಿಡಲು ಪೊಲೀಸರು ನಿರಾಕರಿಸುತ್ತಿದ್ದು, ಭಾರೀ ಹೈಡ್ರಾಮವೇ ನಡೆಯುತ್ತಿದೆ.

ಇಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

Share This Article
Leave a Comment

Leave a Reply

Your email address will not be published. Required fields are marked *