ಜೈಲಿನಿಂದ್ಲೇ ಪೋಷಕರಿಗೆ ಪತ್ರ ಬರೆದ ವರ್ಷಿಣಿ

Public TV
1 Min Read

ಬೆಂಗಳೂರು: ರೌಡಿಶೀಟರ್ ಲಕ್ಷ್ಮಣನ ಕೊಲೆ ಕೇಸಿನಲ್ಲಿ ಜೈಲು ಶಿಕ್ಷೆಯಲ್ಲಿರುವ ವರ್ಷಿಣಿ ತಮ್ಮ ತಂದೆ-ತಾಯಿಗೆ ಪತ್ರವೊಂದನ್ನು ಬರೆದಿದ್ದಾಳೆ.

ವರ್ಷಿಣಿಗೆ ತಾನು ಮಾಡಿದ್ದ ತಪ್ಪಿನ ಬಗ್ಗೆ ಜ್ಞಾನೋದಯವಾದಂತಿದೆ. ಪತ್ರದಲ್ಲಿ ಪೋಷಕರಲ್ಲಿ ವರ್ಷಿಣಿ ಕ್ಷಮೆ ಕೇಳಿದ್ದಾಳೆ. ಜೂನ್ 4 ರಂದು ಆರೋಪಿ ವರ್ಷಿಣಿಯ ಹುಟ್ಟು ಹಬ್ಬವಿತ್ತು. ಅದೇ ದಿನ ವರ್ಷಿಣಿ ಜೈಲಿನಿಂದ ಪೋಷಕರಿಗೆ ಪತ್ರ ಬರೆದಿದ್ದಾಳೆ. ತನ್ನ ತಾಯಿ ಪದ್ಮ ಜೈಲಿಗೆ ಮಗಳನ್ನ ನೋಡಿಕೊಂಡು ಬರುವುದಕ್ಕೆ ಹೋದಾಗ ತಾಯಿ ಕೈಯಲ್ಲಿ ಪತ್ರ ಕಳಿಸಿಕೊಟ್ಟಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ರೌಡಿ ಲಕ್ಷ್ಮಣ್ ಕೊಲೆ ಆರೋಪಿ ವರ್ಷಿಣಿ ಮೇಲೆ ಕೋಕಾ ಕಾಯ್ದೆ ಪ್ರಯೋಗ!

ಪತ್ರದಲ್ಲಿ ಏನಿದೆ?
ಐ ಲವ್ ಯೂ ಅಪ್ಪ, ಅಮ್ಮ Sorry..sorry.sorry… ಹಲೋ ಮಮ್ಮಿ ಡ್ಯಾಡಿ ಎಲ್ಲರೂ ಹೇಗಿದ್ದೀರಾ. ನನಗೆ ಜೈಲಿನಲ್ಲಿರುವುದಕ್ಕೆ ಹಿಂಸೆ ಆಗುತ್ತಿದೆ. ಅಮ್ಮ-ಅಪ್ಪ ನೀವೆಲ್ಲ ತುಂಬಾನೇ ಒಳ್ಳೆಯವರು, ನಾನು ಕೆಟ್ಟವಳು. ನಾನು ಕೆಟ್ಟ ಹುಡುಗಿ, ನನ್ನಿಂದ ನಿಮಗೆ ತುಂಬಾ ತೊಂದರೆಯಾಗಿದೆ. ನನ್ನನ್ನು ಜೈಲಿನಿಂದ ಹೊರಗಡೆ ಕರೆದುಕೊಂಡು ಹೋಗಿ. ಜೈಲಿನಲ್ಲಿ ಇರುವುದಕ್ಕೆ ರೋದನೆ ಆಗುತ್ತಿದೆ. ಈ ರೀತಿ ಮನಶಾಂತಿ ಬೇಕೆಂದು ಪೋಷಕರ ಬಳಿ ಆರೋಪಿ ವರ್ಷಿಣಿ ತನ್ನ ಅಳಲನ್ನ ತೋಡಿಕೊಂಡಿದ್ದಾಳೆ. ಇದನ್ನೂ ಓದಿ: ಕೊನೆಗೂ ರೌಡಿ ಲಕ್ಷ್ಮಣ್ ಕೊಲೆ ಹಿಂದಿನ ರಹಸ್ಯ ಬಯಲು – ಮೂರು ಕಾರಣಕ್ಕೆ ಹತ್ಯೆಯ ಸ್ಕೆಚ್

ವರ್ಷಿಣಿ ವಿರುದ್ಧ ಪೊಲೀಸರು ಕೋಕಾ ಆ್ಯಕ್ಟ್ ಕೂಡ ಜಾರಿ ಮಾಡಿದ್ದಾರೆ. ಕೊಕಾ ಆ್ಯಕ್ಟ್ ಭೇದಿಸಿಕೊಂಡು ಹೊರಗಡೆ ಬರುವುದಕ್ಕೆ ಆರೋಪಿ ವರ್ಷಿಣಿಗೆ ವರ್ಷಗಳೇ ಕಳೆದು ಹೋಗುತ್ತದೆ. ಹಾಗಾಗಿ ವರ್ಷಿಣಿಗೆ ಲಕ್ಷ್ಮಣನ ಕೊಲೆ ಕೇಸ್ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದು, ಜೈಲಿನಿಂದ ಪತ್ರ ಬರೆದು ತನ್ನ ಅಳಲನ್ನ ತೋಡಿಕೊಂಡಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *