ಕಪ್ಪುಪಟ್ಟಿಯಲ್ಲಿದ್ದ ಗುತ್ತಿಗೆದಾರರಿಗೆ ದೋಸ್ತಿ ಸರ್ಕಾರದಿಂದ ರತ್ನಗಂಬಳಿ!

Public TV
1 Min Read

ಬೆಂಗಳೂರು: ಕಪ್ಪುಪಟ್ಟಿಯಲ್ಲಿದ್ದ ಗುತ್ತಿಗೆದಾರರಿಗೆ ದೋಸ್ತಿ ಸರ್ಕಾರವು ರತ್ನಗಂಬಳಿ ಹಾಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಕಳಪೆ ಕಾಮಗಾರಿ ಮೂಲಕ ಸರ್ಕಾರದ ಹಣವನ್ನು ಲೂಟಿ ಹೊಡೆಯುತ್ತಿದ್ದ ಗುತ್ತಿಗೆದಾರರಿಗೆ ಅಜೀವ ನಿಷೇಧ ಹೇರಲಾಗಿತ್ತು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಡಳಿತದ ಅವಧಿಯಲ್ಲಿ ಇದನ್ನು ತೆರವುಗೊಳಿಸಿ, 3 ವರ್ಷಕ್ಕೆ ಇಳಿಸುವ ಕಾನೂನು ತರಲು ಮುಂದಾಗಿದ್ದರು. ಇದಕ್ಕೆ ಈಗ ಸಿಎಂ ಕುಮಾರಸ್ವಾಮಿ ಅವರು ಒಪ್ಪಿಗೆ ಸೂಚಿಸಿದ್ದಾರೆ.

ಅಜೀವ ನಿಷೇಧ ತೆರವುಗೊಳಿಸಿದ್ದರ ಹಿಂದಿನ ಉದ್ದೇಶವೇನು? ಇದು ಮೈತ್ರಿ ಸರ್ಕಾರದ ನಿರ್ಧಾರವಲ್ಲ. ಆದರೂ ವಿರೋಧ ಮಾಡಲಿಲ್ಲ ಯಾಕೆ? ರಾಜ್ಯ ಲೂಟಿ ಮಾಡಿದವರಿಗೆ ರತ್ನಗಂಬಳಿ ಹಾಸಿದ್ದು ಸರಿಯೇ? ಸರ್ಕಾರದ ಹಣವನ್ನು ಲೂಟಿ ಹೊಡೆದವರಿಗೆ ಮತ್ತೆ, ಮತ್ತೆ ಗುತ್ತಿಗೆ ನೀಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಈಗ ಎದ್ದಿದೆ.

ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರಿಗೆ ಬಿಸಿ ಮುಟ್ಟಿಸುವುದಕ್ಕಾಗಿ ಅಜೀವ ನಿಷೇಧ ಕಾನೂನು ಜಾರಿಗೆ ತರಲಾಗಿತ್ತು. ಇದರಿಂದಾಗಿ ಅನೇಕ ಗುತ್ತಿಗೆದಾರರು ಬೇಜವಾಬ್ದಾರಿ ತೋರದೆ ಕೆಲಸ ಮಾಡುತ್ತಿದ್ದರು. ಆದರೆ ಈಗ ಮೂರು ವರ್ಷ ಮಾತ್ರ ನಿಷೇಧ ಮಾಡಿದ್ದು ಎಷ್ಟು ಸರಿ? ಕಾನೂನು ಸಡಿಲಗೊಂಡಿದ್ದರಿಂದ ಗುತ್ತಿಗೆದರರಿಗೆ ಭಯ ಕಡಿಮೆ ಆಗಲಿದೆ. ಕೇವಲ ಮೂರು ವರ್ಷ ಅಷ್ಟೇ ಅಲ್ಲವೇ ಎಂಬ ಭಾವನೆಯಿಂದ ಸರ್ಕಾರಿ ಕಾಮಗಾರಿಯಲ್ಲಿ ಹಣ ಲೂಟಿ ಮಾಡುತ್ತಾರೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

https://www.youtube.com/watch?v=-lilJp5Vy2s

Share This Article
Leave a Comment

Leave a Reply

Your email address will not be published. Required fields are marked *