ಕಿಸಾನ್ ಯೋಜನೆ ಎಲ್ಲ ರೈತರಿಗೆ ವಿಸ್ತರಣೆ: ಜುಲೈ 5ಕ್ಕೆ ಬಜೆಟ್ ಮಂಡನೆ

Public TV
1 Min Read

ನವದೆಹಲಿ: ಪ್ರಧಾನಿ ಮೋದಿ ಅವರು ಮೊದಲ ಕ್ಯಾಬಿನೆಟ್‍ನಲ್ಲೇ ದೇಶದ ಜನತೆಗೆ ಅದರಲ್ಲೂ ಶ್ರಮಿಕ ವರ್ಗವಾದ ರೈತರು, ಕಾರ್ಮಿಕರು, ವ್ಯಾಪಾರಿಗಳಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಪ್ರಣಾಳಿಕೆಯ ಸಂಕಲ್ಪ ಪತ್ರದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ

ಕ್ಯಾಬಿನೆಟ್ ನಿರ್ಧಾರಗಳು?:
ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ಯೋಜನೆ ಎಲ್ಲಾ ರೈತರಿಗೂ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಎಲ್ಲಾ ರೈತರಿಗೂ ವಾರ್ಷಿಕ 6 ಸಾವಿರ ರೂ. ಜಮೆ ಆಗಲಿದೆ. ಈ ಹಿಂದೆ 4.94 ಎಕ್ರೆ(2 ಹೆಕ್ಟೇರ್) ಹೊಂದಿದ ರೈತರಿಗೆ ಮಾತ್ರ ಈ ಯೋಜನೆ ಅನ್ವಯವಾಗುತಿತ್ತು. ಈ ಯೋಜನೆ ಮೂಲಕ ವರ್ಷಕ್ಕೆ ಮೂರು ಕಂತುಗಳಲ್ಲಿ 2 ಸಾವಿರ ರೂ. ಹಣ ರೈತರ ಖಾತೆಗೆ ಜಮೆಯಾಗಲಿದೆ. ಇದನ್ನೂ ಓದಿ: ಯಾವೆಲ್ಲ ರೈತರಿಗೆ 6 ಸಾವಿರ ರೂ. ಸಿಗುತ್ತೆ? ಅರ್ಹತೆ ಏನು? ಯಾವಾಗ ಕೊನೆಯ ದಿನ? ಇಲ್ಲಿದೆ ಪೂರ್ಣ ಮಾಹಿತಿ 

60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ, 14.5 ಕೋಟಿ ರೈತರಿಗೆ ಅನುಕೂಲವಾಗಲಿದೆ. 15 ಸಾವಿರ ರೂ. ಮಾಸಿಕ ವೇತನ ಇರುವ ಅಸಂಘಟಿತ ವಲಯದ ಕಾರ್ಮಿಕರು ಮಾಸಿಕ 300 ರೂ. ಪಾವತಿಸಿದರೆ 60 ವರ್ಷದ ಬಳಿಕ ತಿಂಗಳಿಗೆ 3000 ರೂ. ಪಿಂಚಣಿ ಸಿಗಲಿದೆ. 1.5 ಕೋಟಿ ವಹಿವಾಟಿನ ಸಣ್ಣಕೈಗಾರಿಕೆಗಳನ್ನು ಜಿಎಸ್‍ಟಿಯಿಂದ ಹೊರಕ್ಕೆ ಇಡಲಾಗಿದೆ. ಇದನ್ನೂ ಓದಿ: ದೇಶ ರಕ್ಷಣೆಗೈದವರಿಗೆ ಮೊದಲ ಗೌರವ – ಹುತಾತ್ಮ ಯೋಧರ ಮಕ್ಕಳ ವಿದ್ಯಾರ್ಥಿ ವೇತನ ಏರಿಕೆ

ಜೂನ್ 17 ರಿಂದ ಜುಲೈ 26ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನ ನಡೆಯಲಿದ್ದು, ಜೂನ್ 19ಕ್ಕೆ ಹೊಸ ಸ್ಪೀಕರ್ ಆಯ್ಕೆ ಮಾಡಲಾಗುತ್ತದೆ. ಜೂನ್ 20ಕ್ಕೆ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಲಿದ್ದು, ಜುಲೈ 5ಕ್ಕೆ ಬಜೆಟ್ ಅಧಿವೇಶನ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *