ಬೇರೆ ರೂಟ್‍ಗೆ ಹೋಗು ಅಂದಿದ್ದಕ್ಕೆ ಬಡಿದಾಡಿದ ಸಾರಿಗೆ ಸಿಬ್ಬಂದಿ!

Public TV
1 Min Read

ಹಾವೇರಿ: ವಾಯುವ್ಯ ಸಾರಿಗೆ ಬಸ್ ಕಂಟ್ರೋಲರ್ ಮತ್ತು ಕಂಡಕ್ಟರ್ ನಡುವೆ ಮಾತಿಗೆ ಮಾತು ಬೆಳೆದು ಬಸ್ ನಿಲ್ದಾಣದಲ್ಲಿಯೇ ಇಬ್ಬರು ಬಡಿದಾಡಿಕೊಂಡ ಘಟನೆ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ.

ಶಿಗ್ಗಾಂವಿ ಬಸ್ ನಿಲ್ದಾಣದ ಕಂಟ್ರೋಲರ್ ಎಂ.ಎನ್.ಶಿರಗುಪ್ಪಿ ಮತ್ತು ಕಂಡಕ್ಟರ್ ಶಂಕರಪ್ಪ ನಡುವೆ ಗಲಾಟೆ ನಡೆದಿದೆ. ಅಲ್ಲದೆ ಇಬ್ಬರು ಹೊಡೆದಾಡುವುದನ್ನ ಬಿಡಿಸಲು ಜನರು ಹರಸಾಹಸವನ್ನೇ ಪಟ್ಟಿದ್ದಾರೆ. ಬೇರೆ ರೂಟ್‍ಗೆ ಡ್ಯೂಟಿಗೆ ಹೋಗುವಂತೆ ಕಂಟ್ರೋಲರ್ ನಿರ್ವಾಹಕನಿಗೆ ಹೇಳಿದ್ದಕ್ಕೆ ಈ ಹೊಡೆದಾಟ ನಡೆದಿದೆ. ಮೊದಲು ಬರೀ ಮಾತಿನಿಂದ ಶುರುವಾದ ಜಗಳ ಕೊನೆಗೆ ಇಬ್ಬರೂ ಕೈ ಕೈ ಹಿಡಿದುಕೊಂಡು ಹೊಡೆದಾಡುವ ಮಟ್ಟಿಗೆ ತಲುಪಿದೆ.

ನಿರ್ವಾಹಕನಿಗೆ ಹುಲಗೂರು ಕಡೆ ಭಾಗದಲ್ಲಿ ಜನರು ಹೆಚ್ಚಾಗಿದ್ದಾರೆ, ಆ ರೂಟ್‍ಗೆ ಹೋಗು ಎಂದು ಕಂಟ್ರೋಲರ್ ಹೇಳಿದ್ದಾರೆ. ಆದರೆ ನಿರ್ವಾಹಕ ಈ ಮಾತಿಗೆ ನಿರಾಕರಿಸಿದ್ದಾನೆ. ಆಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಕೊನೆಗೆ ಸ್ಥಳೀಯರು ಹಾಗೂ ಪೊಲೀಸರ ಗಲಾಟೆಯನ್ನು ಶಾಂತಗೊಳಿಸಿದ್ದಾರೆ. ಅಲ್ಲದೆ ಡಿಪೋ ಮ್ಯಾನೇಜರ್ ಗೆ ಈ ಬಗ್ಗೆ ದೂರು ನೀಡಲು ಕಂಟ್ರೋಲರ್ ಮುಂದಾಗಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *