ಯಾರ ಹತ್ರನೂ ಡಿಶುಂ, ಡಿಶುಂ ಮಾಡೋ ಅವಶ್ಯಕತೆ ನನಗಿಲ್ಲ: ಹೆಚ್.ಡಿ.ರೇವಣ್ಣ

Public TV
1 Min Read

ಬೆಂಗಳೂರು: ಬುಧವಾರ ಸಚಿವ ಹೆಚ್.ಡಿ.ರೇವಣ್ಣ ಹಾಸನದಲ್ಲಿ ಗೋಲಿಬಾರ್ ಆದ್ರೆ ನಾನು ಕಾರಣನಲ್ಲ ಎಂಬ ಹೇಳಿಕೆಗೆ ಇಂದು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ಹಾಸನದ ಡಿಸಿ ಮತ್ತು ಸಚಿವರಿಗೂ ಡಿಶುಂ ಡಿಶುಂ ಎಂದು ಬಿತ್ತರವಾಗುತ್ತಿದೆ. ಯಾರ ಜೊತೆಗೂ ವೈಯಕ್ತಿಕವಾಗಿ ಡಿಶು ಡಿಶುಂ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಸಚಿವ ರೇವಣ್ಣ ಹೇಳಿದ್ದಾರೆ.

ಬರ ನಿರ್ವಹಣೆಗಾಗಿ 10 ಕೋಟಿ ಮತ್ತು ಕುಡಿಯುವ ನೀರಿಗಾಗಿ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ಸಂಬಂಧ ಜಿಲ್ಲಾ ಪಂಚಾಯ್ತಿ ಸಿಇಓರನ್ನು ಕೇಳಿದ್ರೆ ಹಣ ಜಿಲ್ಲಾಧಿಕಾರಿಗಳ ಬಳಿಯಲ್ಲಿದೆ ಎಂದ್ರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿರಲಿಲ್ಲ. ಈಗ ಆಯೋಗ ನೀತಿ ಸಂಹಿತೆ ಸಡಿಲಿಸಿದೆ ಹಣ ಖರ್ಚು ಮಾಡಬಹುದು ಎಂದರು.

ಹಾಸನ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಬರ ನಿಭಾಯಿಸಲು ಈವರೆಗೆ ಒಂದೇ ಒಂದು ಪೈಸೆ ಹಣ ಬಿಡುಗಡೆ ಮಾಡಿಲ್ಲ. ಒಂದೇ ವೇಳೆ ಗೋಲಿಬಾರ್ ಆದ್ರೆ ಅದಕ್ಕೆ ಡಿಸಿ ನೇರ ಹೊಣೆಯಾಗುತ್ತಾರೆ ಎಂದು ರೇವಣ್ಣ ಹೇಳಿದ್ದರು. ಸಚಿವರ ಹೇಳಿಕೆಗೆ ತಿರುಗೇಟು ನೀಡಿದ್ದ ಡಿಸಿ ಪ್ರಿಯಾಂಕಾ, ತಹಶೀಲ್ದಾರರಿಗೆ ಬರ ನಿರ್ವಹಣೆಯ ಹಣ ಸರಿಯಾಗಿ ಬಿಡುಗಡೆಯಾಗುತ್ತಿದೆ. ಬಿತ್ತನೆ ಆಲೂಗೆಡ್ಡೆಗೆ ಸಬ್ಸಿಡಿ ಕುರಿತು ಶೀಘ್ರವಾಗಿ ನಿರ್ದೇಶನದಂತೆ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *