ಬಳ್ಳಾರಿ: ಹೊಸಪೇಟೆ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ಜೈಲುವಾಸ ಅನುಭವಿಸಿ, ಬಿಡುಗಡೆಯಾಗಿರುವ ಕಂಪ್ಲಿ ಶಾಸಕ ಗಣೇಶ್ ಇದೀಗ ಕಷ್ಟಗಳಿಂದ ಪಾರಾಗಲು ನಾಗಸಾಧುವಿನ ಮೊರೆ ಹೋಗಿದ್ದಾರೆ.
ಸಂಡೂರಿನ ಜೋಗಿಹಳ್ಳದ ಬಳಿಯಿರುವ ಅನ್ನಪೂರ್ಣೇಶ್ವರಿ ಮಠದಲ್ಲಿನ ನಾಗಸಾಧುಗಳನ್ನು ಕಂಪ್ಲಿ ಗಣೇಶ್ ಭೇಟಿ ಮಾಡಿ ಆಶೀರ್ವಾದ ಪಡೆದು ನೋವು ತೋಡಿಕೊಂಡಿದ್ದಾರೆ. ಗಣೇಶ್ ಅವರು ಕುಟುಂಬ ಸಮೇತರಾಗಿ ನಾಗಸಾಧು ಮೊರೆ ಹೋಗಿದ್ದು, ನಾಗಸಾಧು ಇರುವ ಮಠದಲ್ಲಿ ಕೆಲಕಾಲ ಧ್ಯಾನ ಮಾಡಿದ್ದಾರೆ. ಈ ವೇಳೆ ಮೌನ ವ್ರತದಲ್ಲಿದ್ದ ನಾಗಸಾಧು, ಸ್ಲೇಟ್ನಲ್ಲೇ ಬರೆದು ಒಳ್ಳೆಯದಾಗುತ್ತೆ ಎಂದು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಆಶೀರ್ವದಿಸಿದ್ದಾರೆ.
ಈ ಹಿಂದೆ ಉಪಚುನಾವಣೆಗೂ ಮುನ್ನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಉಗ್ರಪ್ಪ ಅವರು ಈ ನಾಗಸಾಧುಗಳನ್ನೇ ಭೇಟಿ ಮಾಡಿ ಆಶೀರ್ವಾದ ಪಡೆದು ನಂತರ ಗೆಲುವು ಸಾಧಿಸಿದ್ದರು. ಹೀಗಾಗಿ ಇದೀಗ ಗಣೇಶ್ ಕೂಡ ಕಷ್ಟಗಳಿಂದ ಪಾರಾಗಾಲು ನಾಗಸಾಧು ಮೊರೆ ಹೋದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.