ವಿಶ್ವಕಪ್ 2019ರ ಬಾಗಿಲು ರಾಯುಡು, ಪಂತ್‍ಗೆ ತೆರೆಯುತ್ತಾ?

Public TV
1 Min Read

ಮುಂಬೈ: ಇಂಗ್ಲೆಂಡ್‍ನಲ್ಲಿ ನಡೆಯಲಿರುವ 2019 ವಿಶ್ವಕಪ್ ಟೂರ್ನಿಗೆ ಬಿಸಿಸಿಐ 15 ಆಟಗಾರರ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಹಂತದಲ್ಲಿ ಯುವ ಆಟಗಾರ ರಿಷಬ್ ಪಂತ್, ಅನುಭವಿ ಅಂಬಟಿ ರಾಯುಡುರನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಆಯ್ಕೆ ಸಮಿತಿ ಸಾಕಷ್ಟು ಟೀಕೆ ಎದುರಿಸಿತ್ತು. ಇದರ ಬೆನ್ನಲ್ಲೇ ಸದ್ಯ ಸಮಿತಿ ಇಬ್ಬರು ಆಟಗಾರರಿಗೂ ಮತ್ತೊಂದು ಅವಕಾಶ ನೀಡಿದೆ ಎಂದು ಹೇಳಬಹುದು.

ಹೌದು, ಬಿಸಿಸಿಐ ರಾಯುಡು ಹಾಗೂ ಪಂತ್ ರೊಂದಿಗೆ ನವದೀಪ್ ಸೈನಿರನ್ನು ಸ್ಟಾಂಡ್ ಬೈ ಪ್ಲೇಯರ್ ಗಳಾಗಿ ಆಯ್ಕೆ ಮಾಡಿ ಪ್ರಕಟಿಸಿದೆ.

ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಅನುಸರಿಸಿದ ನಿಯಮಗಳನ್ನೇ ಇಲ್ಲಿಯೂ ಬಿಸಿಸಿಐ ಮುಂದುವರಿಸಿದ್ದು, ರಾಯುಡು, ಪಂತ್, ಸೈನಿರನ್ನು ಸ್ಟಾಂಡ್ ಬೈ ಪ್ಲೆಯರ್ ಗಳಾಗಿ ಆಯ್ಕೆ ಮಾಡಿದ್ದಾಗಿ ತಿಳಿಸಿದೆ. ಅಲ್ಲದೇ ಸದ್ಯ ಪ್ರಕಟವಾಗಿರುವ 15 ತಂಡದ ಆಟಗಾರರಲ್ಲಿ ಯಾರದರು ಆಕಸ್ಮಾತ್ ಗಾಯಗೊಂಡರೆ ಈ ಆಟಗಾರರಿಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ವಿಶ್ವಕಪ್ ವೀಕ್ಷಣೆಗೆ ಈಗಷ್ಟೇ 3ಡಿ ಕನ್ನಡಕ ಆರ್ಡರ್ ಮಾಡಿದ್ದೇನೆ: ರಾಯುಡು ವ್ಯಂಗ್ಯ

ಉಳಿದಂತೆ ಟೀಂ ಇಂಡಿಯಾ ಆಟಗಾರರು ತರಬೇತಿ ಪಡೆಯುವ ವೇಳೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡಲು ಖಲೀಲ್ ಅಹ್ಮದ್, ದೀಪಕ್ ಚಹರ್, ಆವೇಶ್ ಖಾನ್‍ರನ್ನು ನೇಮಕ ಮಾಡಿದೆ. ಟೀಂ ಇಂಡಿಯಾದೊಂದಿಗೆ ಈ ಮೂವರು ಆಟಗಾರರು ಇಂಗ್ಲೆಂಡ್‍ಗೆ ತೆರಳಿದ್ದಾರೆ. ಆದರೆ ಇವರು ಸ್ಟಾಂಡ್ ಬೈ ಪ್ಲೇಯರ್ ಗಳಲ್ಲ ಎಂದು ಬಿಸಿಸಿಐ ಉನ್ನತ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇತ್ತ ಆಯ್ಕೆ ಸಮಿತಿ ಪ್ರಕಟಿಸಿ ತಂಡದಲ್ಲಿ ರಾಯುಡು ಹೆಸರು ಇಲ್ಲದಿರುವುದು ನನಗೆ ಅಚ್ಚರಿ ತಂದಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಹೇಳಿದ್ದರು. 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಅನುಭವ ಉಳ್ಳ ಆಟಗಾರರು ಇರುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟಿದ್ದರು. ಅಲ್ಲದೇ ಗೌತಮ್ ಗಂಭೀರ್ ಕೂಡ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದನ್ನು ಓದಿ: ಅಂಬಟಿ ರಾಯುಡು ನೋವನ್ನು ನಾನು ಅನುಭವಿಸಿದ್ದೇನೆ: ಗಂಭೀರ್

Share This Article
Leave a Comment

Leave a Reply

Your email address will not be published. Required fields are marked *