ತುಲಾಭಾರ ಸೇವೆ ವೇಳೆ ಅವಘಡ – ಶಶಿ ತರೂರ್‌ಗೆ ಗಂಭೀರ ಗಾಯ

Public TV
1 Min Read

ತಿರುವನಂತಪುರಂ: ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಅವಘಡ ಸಂಭವಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಗಂಭೀರವಾಗಿ ಗಾಯಗೊಂಡ ಘಟನೆ ಕೇರಳದಲ್ಲಿ ಇಂದು ನಡೆದಿದೆ.

ತಿರುವನಂತಪುರಂನ ತಂಪನೂರ್ ನಲ್ಲಿರುವ ಗಾಂಧಾರಿ ಅಮ್ಮಾ ಕೊವಿಲ್ ದೇವಸ್ಥಾನದಲ್ಲಿ ಘಟನೆ ಸಂಭವಿಸಿದೆ. ದೇವಸ್ಥಾನದಲ್ಲಿ ಶಶಿ ತರೂರ್ ಅವರು ತುಲಾಭಾರ ಸೇವೆ ಸಲ್ಲಿಸುತ್ತಿದ್ದರು. ಈ ವೇಳೆ ತಕ್ಕಡಿಯು ಕುಸಿದಿದ್ದು, ಕೆಳಗೆ ಕುಳಿತಿದ್ದ ಶಶಿ ತರೂರ್ ಅವರ ತಲೆಯ ಮೇಲೆ ಬಿದ್ದಿದೆ.

ತಕ್ಕಡಿಯು ತಲೆಯ ಮೇಲೆ ಬಿದ್ದ ಪರಿಣಾಮ ಬಲವಾದ ಪೆಟ್ಟು ಬಿದ್ದಿದ್ದು, ರಕ್ತಸ್ರಾವ ಉಂಟಾಗಿತ್ತು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗಿದೆ.

ಶಶಿ ತರೂರ್ ಅವರ ತಲೆಗೆ ಆರು ಸ್ಟಿಚ್ (ಹೊಲಿಗೆ) ಹಾಕಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *