ಗೋಮಾಂಸ ತಿನ್ಬಾರ್ದು ಅನ್ನೋ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ನೀಡಬೇಡಿ: ಜಫ್ರುಲ್ಲಾ ಖಾನ್

Public TV
1 Min Read

ಮಂಡ್ಯ: ಮುಸ್ಲಿಮರು ದನದ ಮಾಂಸ ತಿನ್ನಬಾರದು. ಈ ದೇಶವನ್ನು ಹಿಂದೂ ದೇಶವನ್ನಾಗಿ ಮಾಡುತ್ತೇವೆ ಎಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿರುವ ಬಿಜೆಪಿ ಬೆಂಬಲಿಸುವ ಅಭ್ಯರ್ಥಿಗೆ ಮತ ನೀಡಬೇಡಿ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಕರೆ ನೀಡಿದ್ದಾರೆ.

ಶನಿವಾರ ಮುಸ್ಲಿಂ ಸಮುದಾಯದ ವತಿಯಿಂದ ಮಂಡ್ಯದ ಕರ್ನಾಟಕ ಭವನದಲ್ಲಿ, ಮಂಡ್ಯ ಜಿಲ್ಲಾ ಮಸೀದಿಗಳ ಸಮಿತಿ ಸಭೆ ಆಯೋಜಿಸಲಾಗಿತ್ತು. ಈ ಬಾರಿ ಲೋಕಸಭಾ ಅಖಾಡದಲ್ಲಿ ಯಾರನ್ನು ಬೆಂಬಲಿಸಬೇಕು ಅನ್ನೋ ಕುರಿತು ಆಯೋಜನೆಗೊಂಡಿದ್ದ ಸಭೆಯಲ್ಲಿ, ಜಿಲ್ಲೆಯ ಬಹುತೇಕ ಮುಸ್ಲಿಂ ಮುಖಂಡರು ಭಾಗವಹಿಸಿದ್ದರು. ಈ ಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾದ ನಿಖಿಲ್ ಕುಮಾರಸ್ವಾಮಿಗೆ ಬೆಂಬಲಿಸೋ ನಿರ್ಣಯವನ್ನು ಮುಸ್ಲಿಂ ಮುಖಂಡರು ಕೈಗೊಂಡರು. ಹಾಗೆಯೇ ಮುಸ್ಲಿಮರು ದನದ ಮಾಂಸ ತಿನ್ನಬಾರದು. ಭಾರತವನ್ನು ಹಿಂದೂ ದೇಶ ಮಾಡುತ್ತೇವೆ ಎಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ನೀಡಬೇಡಿ ಅಂತ ಹೇಳಿದರು.

ಸಭೆಯಲ್ಲಿ ಜಿಲ್ಲೆಯ ಎಲ್ಲಾ ಮಸೀದಿಗಳ ಮೌಲ್ವಿಗಳು ಹಾಜರಿದ್ದು ಬಿಜೆಪಿ ಬೆಂಬಲಿತ, ಪಕ್ಷೇತರ ಅಭ್ಯರ್ಥಿಯಾಗಿರೋ ಸುಮಲತಾ ಅಂಬರೀಶ್ ಅವರನ್ನ ಈ ಬಾರಿ ಚುನಾವಣೆಯಲ್ಲಿ ತಿರಸ್ಕರಿಸೋ ನಿರ್ಣಯ ಕೈಗೊಂಡಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಜಪ್ರುಲ್ಲಾ ಖಾನ್, ದೇವೇಗೌಡರದ್ದು ಸೆಕ್ಯೂಲರ್ ಕುಟುಂಬ ಎಂದು ಹೇಳಿದರು. ಬಳಿಕ ತಾತಾ ಸೆಕ್ಯೂಲರ್, ಅಪ್ಪ ಸೆಕ್ಯೂಲರ್, ಮಗನೂ ಕೂಡ ಸೆಕ್ಯೂಲರ್ ಅನ್ನೋ ಮೂಲಕ ಹೆಚ್‍ಡಿಡಿ ಕುಟುಂಬವನ್ನು ಕೊಂಡಾಡಿದರು.

Share This Article
Leave a Comment

Leave a Reply

Your email address will not be published. Required fields are marked *