ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು- ವೃದ್ಧೆ ಸಾವು

Public TV
1 Min Read

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದು ವೃದ್ಧೆ ಮೃತಪಟ್ಟ ಘಟನೆ ಹಾಸನ ಬೇಲೂರಿನ ವಿಷ್ಣು ಸಮುದ್ರ ಕೆರೆ ಬಳಿ ನಡೆದಿದೆ.

ಬಸುಬ್ಬಿ (55) ಮೃತ ವೃದ್ಧೆ. ಒಂದೇ ಕುಟುಂಬದ ಮೂವರು ಅರೇಹಳ್ಳಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ ಅಜಾಗರೂಕತೆಯಿಂದ ಆಲ್ಟೋ ಕಾರು ಡಿವೈಡರ್ ಗೆ ಗುದ್ದಿ ಕೆರೆಗೆ ಬಿದಿದ್ದೆ.

ತಾಯಿ ಝರೀನಾ ಹಾಗೂ ಮಗ ಇಂತಿಯಾಜ್ ಈ ಘಟನೆಯಿಂದ ಪಾರಾಗಿದ್ದಾರೆ. ಕಾರು ಕೆರೆಗೆ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಸಮಯ ಪ್ರಜ್ಞೆಯಿಂದ ತಾಯಿ- ಮಗ ಇಬ್ಬರನ್ನು ರಕ್ಷಿಸಿದ್ದಾರೆ. ಸದ್ಯ ಇಬ್ಬರಿಗೂ ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *