ನಿಖಿಲ್ ನೋಡಿ ನಾವು ಕಲೀಬೇಕು ಅಂದ್ರು ತೇಜಸ್ವಿನಿ ಅನಂತ್‍ಕುಮಾರ್

Public TV
1 Min Read

ಬೆಂಗಳೂರು: ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳ ಚಾಲೆಂಜ್ ಸ್ವೀಕರಿಸಿ ಸ್ಟ್ರಾ ಇಲ್ಲದೆ ಎಳನೀರು ಕುಡಿದಿದ್ದರು. ನಿಖಿಲ್ ಅವರ ಕೆಲಸಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್‍ಕುಮಾರ್ ಅವರು ಟ್ವೀಟ್ ಮಾಡುವ ಮೂಲಕ ಅವರಿಗೆ ಬೆಂಬಲ ನೀಡಿದ್ದಾರೆ.

ತೇಜಸ್ವಿನಿ ಅನಂತಕುಮಾರ್ ಅವರು, “ನಿಖಿಲ್ ಗೌಡ ಸ್ಟ್ರಾ ಇಲ್ಲದೆ ಎಳನೀರು ಕುಡಿತಾನಂತೆ, ಕಾರಣ ಏನೇ ಇರಲಿ, ಇದನ್ನು ನಾವೆಲ್ಲ ಕಲಿಲೇಬೇಕು. ಯಾಕೆ ಗೊತ್ತಾ? ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಸ್ಟ್ರಾ ಎಳನೀರು ಕುಡಿದು ಬಿಸಾಕುತ್ತೀವಿ. ಈ ಸ್ಟ್ರಾಗಳು ಮರು ಸಂಸ್ಕರಣೆ ಮಾಡಲಾಗುವದಿಲ್ಲ. ನೀರಿಗೊ, ಕಾಡಿಗೊ, ಭೂಮಿಗೊ ಸೇರಿ ಮೂಕಪ್ರಾಣಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸ್ಟ್ರಾ ಉಪಯೋಗ ಬಿಟ್ಟುಬಿಡೋಣ” ಎಂದು ಟ್ವೀಟ್ ಮಾಡಿದ್ದಾರೆ.

ಮಂಡ್ಯದ ಲೋಕಸಭಾ ಚುನಾವಣೆಯ ಕಣದಲ್ಲಿ ನಿಖಿಲ್ ಬಿರುಸಿನಿಂದ ಪ್ರಚಾರ ಮಾಡುತ್ತಿದ್ದರು. ಆಗ ಗ್ರಾಮವೊಂದರಲ್ಲಿ ಅಭಿಮಾನಿಗಳು ನಿಖಿಲ್ ಅವರಿಗೆ ಮಂಡ್ಯದ ಶೈಲಿಯಲ್ಲಿ ಕೆಳಗಿಳಿಸದೆ ಎಳನೀರು ಕುಡಿಯಬೇಕು ಎಂದು ಸವಾಲು ಹಾಕಿದ್ದರು. ಆಗ ಅಭಿಮಾನಿಯ ಆಸೆಯಂತೆ ನಿಖಿಲ್ ಅವರು ಸ್ಟ್ರಾ ಇಲ್ಲದೇ ಕೆಳಗಿಳಿಸದೆ ಎಳನೀರನ್ನು ಕುಡಿದಿದ್ದರು.

Share This Article
Leave a Comment

Leave a Reply

Your email address will not be published. Required fields are marked *