ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ರಮ್ಯಾರನ್ನು ನೆನೆದ ಅಭಿಮಾನಿ

Public TV
1 Min Read

ಮಂಡ್ಯ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಂಸದೆ ರಮ್ಯಾರನ್ನು ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ. ರಮ್ಯಾ ಅವರ ಸೋಲಿನ ನೋವು ನನ್ನ ಮನಸಲ್ಲಿ ಇನ್ನೂ ಇದೆ, ಮರಿಯೋಕೆ ಆಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಅಭಿಮಾನಿ ನೋವು ತೋಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಂಡ್ಯ ಸ್ಟೂಟೆಂಡ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜೀವ್ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ರಮ್ಯಾರನ್ನು ನೆನೆದಿರುವ ಅಭಿಮಾನಿ ರಾಜೀವ್ ಪೋಸ್ಟ್ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಪೋಸ್ಟ್ ಗೆ ನೆಟ್ಟಿಗರು ರಮ್ಯಾ ಸೋಲಿಗೆ ಯಾರು ಕಾರಣ? ಕಾಂಗ್ರೆಸ್ ಬಣ ರಾಜಕೀಯ ತಾನೇ ಕಾರಣ ಎಂದು ಕಾಲೆಳೆಯುತ್ತಿದ್ದಾರೆ. ಇನ್ನೊಂದೆಡೆ ರಮ್ಯಾ ಸೋಲಿನ ನೋವನ್ನು ಸುಮಲತಾ ಗೆಲುವಿನ ಮೂಲಕ ತೀರಿಸಿಕೊಳ್ಳಲು ಹೊರಟ್ರಾ ರಮ್ಯಾ ಅಭಿಮಾನಿಗಳು? ರಮ್ಯಾ ಸೋಲಿಗೆ ಅಂಬರೀಷ್ ಕಾರಣಾನ? ಎಂಬ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿದೆ.

ರಮ್ಯಾ ಅಭಿಮಾನಿಗೆ ಸೋಲಿಗೆ ಕಾರಣ ಯಾರು ತಿಳಿಸಿ ಎಂದು ಪ್ರಶ್ನಿಸುತ್ತ, ಮಂಡ್ಯದಲ್ಲಿ ಹಿಂದೆ ಅಂಬರೀಷ್, ಎಸ್‍ಎಂಕೆ ಬಣ ರಾಜೀಕೀಯ ಇತ್ತು. ಚುನಾವಣೆಯಲ್ಲಿ ಅಂಬರೀಷ್ ಸಪೋರ್ಟ್ ಮಾಡದೇ ಇದಿದ್ದೇ ರಮ್ಯಾ ಸೋಲಿಗೆ ಕಾರಣ ಎಂದು ಕಮೆಂಟ್‍ಗಳನ್ನು ಮಾಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *