ನಾಟಕ ಕಂಪನಿಗಳಿಗೂ ತಟ್ಟಿತು ಲೋಕಸಭಾ ಚುನಾವಣೆಯ ಬಿಸಿ- ಹೀಗೆ ಆದ್ರೆ ಅನ್ನ ತಿನ್ನೋದು ಹೇಗೆ?

Public TV
1 Min Read

– ರಾತ್ರಿ ನಾಟಕ ಆಯೋಜಿಸದಂತೆ ಆಯೋಗದಿಂದ ಸೂಚನೆ
– ನಾಟಕ ಮಾಡದೇ ಇದ್ದರೆ ನಾವು ಬದುಕೋದು ಹೇಗೆ – ಕಲಾವಿದರ ಪ್ರಶ್ನೆ

ಬಳ್ಳಾರಿ: ಲೋಕಸಭಾ ಚುನಾವಣೆಯ ಬಿಸಿ ನಾಟಕ ಕಂಪನಿಗಳಿಗೂ ತಟ್ಟಿದೆ. ಕೂಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ನಿಮಿತ್ತ ಹಲವು ನಾಟಕ ಕಂಪನಿಗಳು ಪ್ರದರ್ಶನ ನೀಡುತ್ತಿವೆ. ಆದರೆ ಇದೀಗ ರಾತ್ರಿ 10 ಗಂಟೆಯ ನಂತರ ಶೋ ನಡೆಸದಂತೆ ಚುನಾವಣಾಧಿಕಾರಿಗಳು ತಾಕೀತು ಮಾಡಿರುವುದು ಬಡ ಕಲಾವಿದರ ಹೊಟ್ಟೆ ಮೇಲೆ ಹೊಡೆದಂತಾಗಿದೆ.

ರಾತ್ರಿ ಶೋ ನಡೆದರೆ ಮಾತ್ರ ಬಡ ಕಲಾವಿದರಿಗೆ ದುಡಿಮೆ ಹೊಟ್ಟೆಗೆ ಅನ್ನವಾಗಿದೆ. ಹೀಗಾಗಿ ರಾಜ್ಯದ ಯಾವ ನಾಟಕ ಕಂಪನಿಗಳಿಗೆ ಇರದ ನಿಯಮ ಬಳ್ಳಾರಿಯ ಕೊಟ್ಟೂರು ಪಟ್ಟಣದಲ್ಲಿ ಇರುವ ಗುಬ್ಬಿ ನಾಟಕ ಕಂಪನಿಗಳಿಗೆ ಮಾತ್ರ ನೀತಿ ಸಂಹಿತೆ ಬಿಸಿನಾ ಎಂದು ಕಲಾವಿದರು ಪ್ರಶ್ನೆ ಮಾಡುತ್ತಿದ್ದಾರೆ.

ಎಲ್ಲ ಜಿಲ್ಲೆಯಲ್ಲೂ ನಡೆಯುವಂತಹ ಜಾತ್ರೆಯಲ್ಲಿ ಕಲಾವಿದರು ನಾಟಕ ಪ್ರದರ್ಶನ ಮಾಡುತ್ತಾರೆ. ಹೀಗಾಗಿ ನಾಟಕ ಕಂಪನಿಗಳಿಗೆ ಜಾತ್ರೆಗಳೇ ಆದಾಯವಾಗಿವೆ. ಬಳ್ಳಾರಿಯ ಕೊಟ್ಟೂರು ಪಟ್ಟಣದಲ್ಲಿ ಎರಡು ನಾಟಕ ಕಂಪನಿಗಳು ಬೀಡುಬಿಟ್ಟಿವೆ. ಆದರೆ ಅಧಿಕಾರಿಗಳು ರಾತ್ರಿ ವೇಳೆ ಪ್ರದರ್ಶನ ಮಾಡಬಾರದು ಎಂದು ನೋಟಿಸ್ ಕೊಟ್ಟಿದ್ದಾರೆ. ಸಿನಿಮಾಗಳಿಗೆ ಇಲ್ಲದ ನೀತಿ ಸಂಹಿತೆ, ನಾಟಕ ಕಂಪನಿಗಳಿಗೆ ಏಕೆ ಎಂದು ಕಲಾವಿದರು ಪ್ರಶ್ನೆ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *