ಬೆಂಗ್ಳೂರಲ್ಲಿ ಹೇಳಿ ಈಗ ಪಾಕಿಸ್ತಾನದಲ್ಲಿ ಏರ್ ಶೋ ನಡೆಸ್ತಿದ್ದಾರೆ: ನೆಟ್ಟಿಗರ ಸಂಭ್ರಮಾಚರಣೆ

Public TV
2 Min Read

ಕೊಪ್ಪಳ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದ್ದು, ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಆದರೆ ಕೊಪ್ಪಳದಲ್ಲಿ ವಿದ್ಯಾರ್ಥಿಗಳು ವಿಭಿನ್ನವಾಗಿ ಪಾಕಿಸ್ತಾನದ ವಿರುದ್ಧ ಡೈಲಾಗ್‍ಗಳ ಸುರಿಮಳೆ ಮಾಡುತ್ತಿದ್ದಾರೆ.

ಕೊಪ್ಪಳದ ಗಂಗಾವತಿಯ ಸಂಕಲ್ಪ ಕಾಲೇಜ್ ಮತ್ತು ಕಲ್ಮಠ ಮಹಿಳಾ ಪ್ರಥಮ ದರ್ಜೆಯ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ವಿಧ್ಯಾರ್ಥಿಗಳು ಪಾಕಿಸ್ತಾನದ ವಿರುದ್ಧ ವಿಭಿನ್ನವಾಗಿ ಡೈಲಾಗ್‍ಗಳು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳು ಎರ್ ಸರ್ಜಿಕಲ್ ಸ್ಟ್ರೈಕ್‍ಗೆ ಮೆಚ್ಚುಗೆ ವ್ಯಕ್ತಪಡಿಸಿ ಉಗ್ರರ ವಿರುದ್ಧ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.

ವಿದ್ಯಾರ್ಥಿಗಳು ಕಣ್ಣನ್ ದೇವನ್ ಚಹಾಪುಡಿ. ಪಾಕಿಸ್ತಾನ್ ಪುಡಿಪುಡಿ ಎಂದು ಘೋಷಣೆ ಕೂಗುತ್ತಿದ್ದಾರೆ. ಇದಲ್ಲದೇ ಇದು ಜಸ್ಟ್ ಟ್ರೈಲರ್. ಪಿಕ್ಚರ್ ಅಭಿ ಬಾಕಿ ಹೇ ಎಂದು ಹೇಳಿದ್ದಾರೆ. ಅಲ್ಲದೇ ನಮ್ ತಂಟೆಗೆ ಬಂದರೆ ಸುಮ್ನೆ ಬಿಡಲ್ಲ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೂ ಏರ್ ಸ್ಟ್ರೈಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪಾಕಿಸ್ತಾನಕ್ಕೆ ಕಾಲೆಳೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಆರಂಭವಾದ ಏರ್ ಶೋ ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ದಾಳಿ ಮಾಡುವ ಮೂಲಕ ಮುಕ್ತಾಯವಾಗಿದೆ ಎಂದು ನೆಟ್ಟಿಗರೊಬ್ಬರು ಫೇಸ್‍ಬುಕ್‍ನಲ್ಲಿ ಪಾಕಿಸ್ತಾನದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಮತ್ತೊಬ್ಬರು ಮೋದಿ ಅವರು ನಮ್ಮ ಕರ್ನಾಟಕಕ್ಕೆ ಮೋಸ ಮಾಡುತ್ತಿದ್ದಾರೆ. ಏರ್ ಶೋ ಬೆಂಗಳೂರಿನಲ್ಲಿ ಎಂದು ಹೇಳಿ, ಇವಾಗ ಏರ್ ಶೋವನ್ನು ಪಾಕಿಸ್ತಾನದಲ್ಲಿ ನಡೆಸುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

ಇದೇನ್ ಗುರು ಏರ್ ಶೋ ಬೆಂಗಳೂರಿನಲ್ಲಿ ಅಂತ ಹೇಳಿ ಪಾಕಿಸ್ತಾನದತ್ತ ಹೊರಟವರೇ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಮೂಲಗಳ ಪ್ರಕಾರ ಮೊದಲು 20 ಕೆಜಿ ಟೊಮೆಟೊ ಎಸೆಯಲಾಯಿತಂತೆ. ಹೆಕ್ಕಲು ಮುಗಿಬಿದ್ದ ಉಗ್ರರ ಮೇಲೆ ಸಾವಿರ ಕೆಜೆ ಬಾಂಬ್ ಹಾಕಲಾಯಿತು ಎಂದು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ.

ಪ್ರಧಾನಿ ಮೋದಿ: ವಾಯು ದಾಳಿ ನಡೆಸಿದ್ದೇವೆ!
ಪಾಕ್ ಪ್ರಧಾನಿ ಇಮ್ರಾನ್ ಖಾನ್: ಸಮಾಧಾನ ಆಯ್ತಾ? ಈಗಲಾದರೂ ಟೊಮೆಟೋ, ನೀರು ಬಿಡಿ ಪ್ಲೀಸ್! ಎಂದು ವ್ಯಂಗ್ಯವಾಗಿ ಗೊರಾ ನರಸಿಂಹ ಮೂರ್ತಿ ಫೆಸ್‍ಬುಕ್‍ನಲ್ಲಿ ಕಮೆಂಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *