ಎಲ್ಲಿಯೂ ಹೋಗಿಲ್ಲ, ತೀರ್ಥ ಯಾತ್ರೆಗೆ ಹೋಗಿ ಬಂದೆ: ಉಮೇಶ್ ಜಾಧವ್

Public TV
1 Min Read

-ನಾನೇ ಆಪರೇಟಿಂಗ್ ಸರ್ಜನ್, ನಾವೇ ಆಪರೇಷನ್ ಮಾಡ್ತೀವಿ

ರಾಯಚೂರು: ಬಿಜೆಪಿ ಪಕ್ಷಕ್ಕೆ ಹೋಗುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಕೇವಲ ಜನ ಮಾತನಾಡುತ್ತಿದ್ದಾರೆ. ಈ ಸಂಬಂಧ ನಾನು ನಿರ್ಧಾರ ಮಾಡಿಲ್ಲ ಅಂತ ಸಮ್ಮಿಶ್ರ ಸರ್ಕಾರದ ಅತೃಪ್ತ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಹೇಳಿದ್ದಾರೆ.

ರಾಯಚೂರು ರೈಲ್ವೇ ನಿಲ್ದಾಣದಲ್ಲಿ ಮಾತನಾಡಿದ ಶಾಸಕರು, ನಾನೂ ಎಲ್ಲಿಗೂ ಹೋಗಿಲ್ಲ ತೀರ್ಥ ಯಾತ್ರೆಗೆ ಹೋಗಿದ್ದೆ. ಸಮಸ್ಯೆಗಳನ್ನ ಬಗೆಹರಿಸುತ್ತಾರೆ ಅಂದಮೇಲೆ ಎಲ್ಲಿಗೆ ಹೋಗೋ ಪ್ರಶ್ನೆಯಿಲ್ಲ. ಕಾರ್ಯಕರ್ತರಯ ಮನೆ ಮುಂದೆ ಪ್ರತಿಭಟನೆ ಮಾಡಿದ್ದರಿಂದ ಡಿಪ್ರೆಷನ್ ನಲ್ಲಿ ಆಸ್ಪತ್ರೆಗೆ ಸೇರಿದ್ದೆ. ನಾವು ಆಪರೇಷನ್ ಗೆ ಒಳಗಾಗುವವರಲ್ಲ ಆಪರೇಟಿಂಗ್ ಸರ್ಜನ್ ಇದ್ದೀನಿ ನಾವೇ ಆಪರೇಷನ್ ಮಾಡುವವರು ಇದ್ದೇವೆ ಎಂದರು.

ಮುಂದಿನ ನಡೆ ಬಗ್ಗೆ ಯಾವುದನ್ನೂ ತೀರ್ಮಾನ ಮಾಡಿಲ್ಲ. ನಾವು ಯಾವುದೇ ಉಸ್ತುವಾರಿ ಕೇಳುತ್ತಿಲ್ಲ ಕ್ಷೇತ್ರದ ಅಭಿವೃದ್ಧಿ ಆಗಬೇಕು ಅನ್ನೋದು ನಮ್ಮ ಆಸೆ. ಬಿಜೆಪಿಯವರು ಯಾರೂ ಸಂಪರ್ಕ ಮಾಡಿಲ್ಲ, ನಮ್ಮ ಹಿತ ಬಯಸುವವರು ಮಾತ್ರ ಸಂಪರ್ಕದಲ್ಲಿದ್ದಾರೆ. ಪತ್ನಿಗೆ ಶಸ್ತ್ರಚಿಕಿತ್ಸೆಯಾಗಿತ್ತು ಹೀಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಹೊರಟಿದ್ದೇನೆ, ಎರಡು ದಿನಗಳ ಬಳಿಕ ಕ್ಷೇತ್ರಕ್ಕೆ ಮರಳುತ್ತೇನೆ ಅಂತ ಅತೃಪ್ತ ಶಾಸಕ ಉಮೇಶ್ ಜಾಧವ್ ಹೇಳಿದರು. ರೈಲ್ವೆ ನಿಲ್ದಾಣದಲ್ಲಿ ಬಿಜೆಪಿ ಮುಖಂಡ ತ್ರಿವಿಕ್ರಮ ಜೋಶಿಯನ್ನ ಭೇಟಿ ಮಾಡಿದ ಜಾಧವ್ ಒಂದೇ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *