ಕೆಜಿಎಫ್‍ನಲ್ಲಿ ಕುಡುಕನ ಅವಾಂತರ- 5 ಮನೆಗಳ ಮೇಲ್ಛಾವಣಿ ಧ್ವಂಸ!

Public TV
1 Min Read

ಕೋಲಾರ: ಕುಡಿದ ನಶೆಯಲ್ಲಿ ಕುಡುಕನೊಬ್ಬ ಮನೆಗಳ ಮೇಲ್ಛಾವಣಿ ಹಾಗೂ ಗೃಹಪಯೋಗಿ ವಸ್ತುಗಳನ್ನು ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ಕೆಜಿಎಫ್ ನಗರದ ಇರುದಯಂ ಕಾಲೋನಿಯಲ್ಲಿ ಸೋಮವಾರ ನಡೆದಿದೆ.

ಕುಡಿದ ಮತ್ತಿನಲ್ಲಿದ್ದ ಅದೇ ಕಾಲೋನಿಯ ನಿವಾಸಿ ಮಂಜುನಾಥ್ ಎಂಬಾತ 5 ಮನೆಗಳಲ್ಲಿ ಪಿಠೋಪಕರಣ, ಮೇಲ್ಛಾವಣಿಯನ್ನು ಕುಡುಕ ಧ್ವಂಸ ಮಾಡಿದ್ದಾನೆ. ಮಂಜುನಾಥ್ ಅಂದರೆ ಕಾಲೋನಿಯ ಜನರಿಗೆ ಒಂಥರಾ ಭಯ. ಕುಡಿದ ಮತ್ತಿನಲ್ಲಿ ಏನೇನು ಮಾಡ್ತಾನೋ ಎನ್ನುವ ಹೆದರಿಕೆ ಸ್ಥಳೀಯರಲ್ಲಿದೆ. ಹೀಗೆ ಕುಡಿದು ಕಾಲೋನಿ ತುಂಬಾ ಓಡಾಡೋ ಮಂಜುನಾಥ್ ಇಂದು ಸ್ಥಳೀಯರಿಗೆ ವಿಪರೀತ ತಲೆನೋವು ಕೊಟ್ಟಿದ್ದಾನೆ.

ಕುಡಿದ ನಶೆಯಲ್ಲಿ ಕಾಲೋನಿಯಲ್ಲಿದ್ದ ಸುಮಾರು 5 ಮನೆಗಳ ಮೇಲೆ ಹತ್ತಿ ಮೇಲ್ಛಾವಣಿಗೆ ಕಲ್ಲು ಹಾಗೂ ಹಂಚು ಎಸೆದು ಪುಡಿ ಪುಡಿ ಮಾಡಿದ್ದಾನೆ. ಅಲ್ಲದೆ ಮನೆಗಳಲ್ಲಿದ್ದ ಪೀಠೋಪಕರಣವನ್ನು ಕೂಡ ಹಾಳು ಮಾಡಿದ್ದಾನೆ. ಈ ಕುಡುಕನ ಅವತಾರಕ್ಕೆ ಕಾಲೋನಿಯ ಮಹಿಳೆಯರು ಹಾಗೂ ಮಕ್ಕಳು ಬೆಚ್ಚಿಬಿದ್ದಿದ್ದಾರೆ. ಕೆಲವರು ಈತನ ಅವಾಂತರವನ್ನು ಮೊಬೈಲ್‍ನಲ್ಲಿ ವಿಡಿಯೋ ಕೂಡ ಮಾಡಿದ್ದಾರೆ.

ಈ ಘಟನೆ ಕುರಿತು ಅಂಡರ್ ಸನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕುಡುಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

https://youtu.be/VpJxEcj9F_w

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *