ಬಾಲ್ಯದ ಕೋಚ್‍ರನ್ನ ಕಳೆದುಕೊಂಡ ಸಚಿನ್ ತೆಂಡೂಲ್ಕರ್

Public TV
1 Min Read

ಮುಂಬೈ: ದ್ರೋಣಾಚಾರ್ಯ ಪ್ರಶಸ್ತಿ ವಿಜೇತ, ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಕ್ರಿಕೆಟ್ ಕೋಚ್ ರಮಾಕಾಂತ್ ಅಚ್ರೆಕಾರ್ (87) ಇಂದು ನಿಧನರಾಗಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರನ್ನು ಒಬ್ಬ ಉತ್ತಮ ಬ್ಯಾಟ್ಸ್ ಮನ್ ಆಗಿ ರೂಪಿಸಿದ್ದ ರಮಾಕಾಂತ್ ಅವರು ವಯೋಸಹಜ ಆನಾರೋಗ್ಯದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭಿಸಿದ್ದು, ರಮಾಕಾಂತ್ ಅವರ ನಿಧನದ ಬಗ್ಗೆ ಸಂಬಂಧಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿ ಖಚಿತ ಪಡಿಸಿದ್ದಾರೆ.

ಬಾಲ್ಯ ದಿನಗಳಲ್ಲೇ ತಮ್ಮನ್ನು ಉತ್ತಮವಾಗಿ ರೂಪಿಸಿದ್ದ ಕೋಚ್ ರಮಾಕಾಂತ್ ಅವರ ಬಗ್ಗೆ ಸಚಿನ್ ಅವರು ಹೆಚ್ಚಿನ ಗೌರವ ಹೊಂದಿದ್ದರು. ರಮಾಕಾಂತ್ ಅವರು ತಮ್ಮ ವೃತ್ತಿ ಜೀವನದಲ್ಲಿ ಕೇವಲ ಸಚಿನ್ ಮಾತ್ರವಲ್ಲದೇ ವಿನೋದ್ ಕಾಂಬ್ಳಿ, ಪ್ರವೀಣ್ ಅಮ್ರೆ, ಸಮೀರ್ ದಿಘೆ ಮತ್ತು ಬಲ್ವಿಂದರ್ ಸಿಂಗ್ ಸಂಧು ಅವರಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ರಮಾಕಾಂತ್ ಅವರು ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಮೊದಲ ಬಾರಿಗೆ ಸಚಿನ್ ರನ್ನು ಭೇಟಿ ಮಾಡಿದ್ರು, ಅವರ ಸಹೋದರ ಅಜಿತ್ ಅವರು ಸಚಿನ್ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ಆರಂಭವಾದ ಗುರು ಶಿಷ್ಯರ ಸಂಬಂಧ ಇಲ್ಲಿಯವರೆಗೂ ಮುಂದುವರೆದಿತ್ತು. ಸಚಿನ್ ಉತ್ತಮ ಅಭ್ಯಾಸದ ವೇಳೆ ಉತ್ತಮ ಪ್ರದರ್ಶನ ನೀಡಿದರೆ, ಅಂದು ಸಚಿನ್ ಅವರಿಗೆ ವಡಾ ಪಾವ್ ಕೊಡಿಸುತ್ತಿದ್ದರು.

ಈ ಹಿಂದೆ ಗುರುಗಳ ಬಗ್ಗೆ ಮಾತನಾಡಿದ್ದ ಸಚಿನ್, ನಾನು ಸರಿಯಾಗಿ ಪ್ರದರ್ಶನ ನೀಡಿಲ್ಲ ಅಂತಾ ಕೋಚ್ ಎಂದು ನನಗೆ ಹೇಳಿಲ್ಲ. ನಾನು ಉತ್ತಮ ಪ್ರದರ್ಶನ ನೀಡಿದ ವೇಳೆ ನನಗೆ ತಿಂಡಿ ಕೊಡಿಸುತ್ತಿದ್ದರು, ಆಗ ನನಗೆ ನಾನು ಉತ್ತಮವಾಗಿ ಆಡಿದ್ದೆ ಎಂದು ತಿಳಿಯುತ್ತಿತ್ತು ಎಂದು ತಮ್ಮ ಜೀವನದ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದರು.

ಕ್ರೀಡೆಗೆ ರಮಾಕಾಂತ್ ಅವರ ನೀಡಿದ ಸೇವೆಯನ್ನು ಗುರುತಿಸಿದ್ದ ಸರ್ಕಾರ ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *