ಕಬ್ಬಡ್ಡಿ ಆಡೋ ವೇಳೆ ವಿದ್ಯಾರ್ಥಿ ದುರ್ಮರಣ

Public TV
1 Min Read

ಮೈಸೂರು: ಕಬ್ಬಡ್ಡಿ ಆಟ ಆಡುವ ವೇಳೆ ವಿದ್ಯಾರ್ಥಿ ಮೃತಪಟ್ಟ ಪ್ರಕರಣವೊಂದು ಮೈಸೂರಿನಲ್ಲಿ ನಡೆದಿದೆ.

ಆಕಾಶ್(15) ಮೃತ ವಿದ್ಯಾರ್ಥಿ. ಈತ ಜನತಾನಗರ ನಿವಾಸಿಯಾಗಿದ್ದು, ಮೈಸೂರಿನ ಶಾರದಾ ದೇವಿ ನಗರದ ಶಾರದಾ ಶಾಲೆ ವಿದ್ಯಾಭ್ಯಾಸ ಮಾಡುತ್ತಿದ್ದನು. ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಕ್ಕೆ ಅಭ್ಯಾಸ ಮಾಡುವ ವೇಳೆ ಈ ಘಟನೆ ನಡೆದಿದೆ.

ಆಕಾಶ್ ರೈಡಿಂಗ್ ಮಾಡಿ ತನ್ನ ಕೋರ್ಟ್ ಕಡೆ ಹೋಗುವ ವೇಳೆ ತಲೆ ಸಿಮೆಂಟ್ ಕಂಬಕ್ಕೆ ಬಡಿದಿದೆ. ಗುರುವಾರ ಅಭ್ಯಾಸ ಮಾಡುವ ವೇಳೆ ಆಕಾಶ್ ಗಾಯಗೊಂಡಿದ್ದನು. ಗಂಭೀರ ಗಾಯಗೊಂಡ ವಿದ್ಯಾರ್ಥಿ ಆಕಾಶ್‍ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಮೃತಪಟ್ಟಿದ್ದಾನೆ.

ಆಕಾಶ್ ಮೃತದೇಹವನ್ನು ಕೆ.ಆರ್. ಆಸ್ಪತ್ರೆಗೆ ಶವಗಾರಕ್ಕೆ ರವಾನಿಸಲಾಗಿದೆ. ಈ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *